SlideShare a Scribd company logo
1 of 77
Download to read offline
ಪರಿವಿಡಿ
1.ಚಾಮರಾಜನಗರದ ವಿಜಯ ಪಾರ್ಶ್ವನಾಥ ಬಸದಿ
2.ವರುಣ
3.ವರ ಕೊಡು ವರದರಾಜ ಸ್ವಾಮಿ ದೇವಸ್ಥಾನ
4.ಟಿ.ನರಸೀಪುರ
◦ ಅಗಸ್ಟೇಶ್ವರ ದೇವಸ್ಥಾನ
◦ ಗುಂಜಾಂ ನರಸಿಂಹ ಸ್ವಾಮಿ ದೇವಸ್ಥಾನ
◦ ಗರ್ಗೇಶ್ವರ ಸ್ವಾಮಿ ದೇವಸ್ಥಾನ
5.ಚಿಕ್ಕಳ್ಳಿಯ ಆಲದ ಮರ
6.ನರಬಲಿ ಪದ್ಧತಿ ಮೈ ಸೂರು ಪ್ರದೇಶದಲ್ಲಿ
1.ಚಾಮರಾಜನಗರದ ವಿಜಯ ಪಾರ್ಶ್ವನಾಥ ಬಸದಿ
2.ವರುಣ
3.ವರ ಕೊಡು ವರದರಾಜ ಸ್ವಾಮಿ ದೇವಸ್ಥಾನ
4.ಟಿ.ನರಸೀಪುರ
◦ ಅಗಸ್ಟೇಶ್ವರ ದೇವಸ್ಥಾನ
◦ ಗುಂಜಾಂ ನರಸಿಂಹ ಸ್ವಾಮಿ ದೇವಸ್ಥಾನ
◦ ಗರ್ಗೇಶ್ವರ ಸ್ವಾಮಿ ದೇವಸ್ಥಾನ
5.ಚಿಕ್ಕಳ್ಳಿಯ ಆಲದ ಮರ
6.ನರಬಲಿ ಪದ್ಧತಿ ಮೈ ಸೂರು ಪ್ರದೇಶದಲ್ಲಿ
ಪೀಠಿಕೆ
 ಮೈ ಸೂರು ಸಾಂಸ್ಕ ೃತಿಕ ಮತ್ತು ಐತಿಹಾಸಿಕ ಪಾರಂಪರಿಕ ಹಿನ್ನೆಲೆ ಹೊಂದಿರುವ ಜಿಲ್ಲೆಯಾಗಿದೆ. ಇಂದು
ಪ್ರತ್ಯೇಕ ಜಿಲ್ಲೆಯಾಗಿರುವ ಚಾಮರಾಜನಗರವು ಹಿಂದೆ ಮೈ ಸೂರು ಜಿಲ್ಲೆಯ ಭಾಗವಾಗಿತ್ತು, ಈ ಎರಡು
ಪ್ರದೇಶಗಳು ಇಂದು ಪ್ರತ್ಯೇಕ ಜಿಲ್ಲೆಯಾಗಿದೆ. ಸಾವಿರಾರು ವರ್ಷ ಇತಿಹಾಸವನ್ನು ಹೊಂದಿದ್ದು, ಹಲವು
ಪುರಾತನ ಐತಿಹಾಸಿಕ ದೇವಾಲಯಗಳು ಸ್ಮಾರಕಗಳು, ಧಾರ್ಮಿಕ ಸ್ಥಳಗಳು, ಕಾವೇರಿ, ಕಪಿಲ ನದಿಗಳು
ಸುಂದರವಾದ ಅರಣ್ಯಗಳು ಬೆಟ್ಟಗುಡ್ಡ ವನ್ಯಜೀವಿಗಳನ್ನು ಹೊಂದಿದ ಪ್ರಕೃತಿ ಸೌಂದರ್ಯವನ್ನು ಹೊಂದಿವೆ,
ನಾನು ಆಯ್ಕೆ ಮಾಡಿಕೊಳಲು ಈ ವಿಷಯವನ್ನು ನಾನು ನನ್ನ ದ್ವಿತೀಯ ಪಿಯುಸಿ ಶಿಕ್ಷಣ ಮೈಸೂರು ತಾಲೂಕಿನ
ವರುಣ ಗ್ರಾಮದಲ್ಲಿ ಓದುತ್ತಿದ್ದಾಗ ನನಗೆ ವರುಣ ಮತ್ತು ನರಸೀಪುರ ಇನ್ನು ಹಲವು ಐತಿಹಾಸಿಕ ಸ್ಮಾರಕ
ನೋಡಿ ಈ ಸ್ಥಳಗಳ ಬಗ್ಗೆ ಹೆಚ್ಚಿನ ಒಲವು ಆಸಕ್ತಿ ಉಂಟಾಯಿತು. ಈ ಭಾಗದ ದೇವಾಲಯಗಳ
ವಿಗ್ರಹಗಳನ್ನು ನೋಡಿದಾಗ ಹಿಂದೆ ಈ ಸ್ಥಳಗಳಿಗೆ ಧಾರ್ಮಿಕ, ರಾಜಕೀಯ ಹಿನ್ನೆಲೆಯು ತಿಳಿದು ಬರುತ್ತದೆ.
ಇವುಗಳಲ್ಲಿ ಕೆಲವು ಕೆಲವು ವಿಶೇಷಗಳೆಂದರೆ ನರಬಲಿ ಇತ್ತು ಎಂಬುದು ವಿಗ್ರಹಗಳ ನೋಡಿದಾಗ
ತಿಳಿಯಬಹುದಾಗಿದೆ. ಸುಂದರವಾದ ಮತ್ತು ಪುರಾತನವಾದ ಆಲದ ಮರ ನನ್ನನ್ನು ಆಕರ್ಷಿಸಿದ್ದಲ್ಲದೆ ನನಗೆ
ಅದರ ಐತಿಹಾಸಿಕತೆಯ ಬಗ್ಗೆ ಕುತೂಹಲ ಉಂಟಾಯಿತು, ಆದ್ದರಿಂದ ನಾನು ಈ ಜಿಲ್ಲೆಯ ಪ್ರದೇಶಗಳನ್ನು
ಆಯ್ಕೆ ಮಾಡಿಕೊಳ್ಳಲು ಕಾರಣವಾಯಿತು. ನಾನು ಆಯ್ಕೆ ಮಾಡಿಕೊಂಡ ಸ್ಥಳಗಳಲ್ಲಿ ಚಾಮರಾಜನಗರ
ಪೇಟೆಯಲ್ಲಿರುವ ವಿಜಯ ಪಾರ್ಶ್ವನಾಥ ಬಸದಿ ಪ್ರಮುಖವಾಗಿದ್ದು, ಹೊಯ್ಸಳ ಕಾಲದಲ್ಲಿ
ನಿರ್ಮಾಣವಾಗುವುದಾಗಿದೆ, ಚಾಮರಾಜನಗರ ಮೊದಲ ದೇವಾಲಯವಾಗಿದೆ ಎಂದು ವಿದ್ವಾಂಸರು
ಅಭಿಪ್ರಾಯ ಪಟ್ಟಿದ್ದಾರೆ. ವಿಷ್ಣುವರ್ಧನ ರಾಜ ಚೋಳರ ಮೇಲೆ ಗೆದ್ದ ಸಂಕೇತವಾಗಿ ಕಟ್ಟಿಸಿದ
ದೇವಾಲಯವಾಗಿದೆ. ನರಸೀಪುರ ಈ ಕ್ಷೇತ್ರ ತ್ರಿವೇಣಿ ಸಂಗಮವಾಗಿದೆ ಈ ಕ್ಷೇತ್ರ ಕಾಶಿ ಗಿಂತ ಒಂದು
ಗುಲಗಂಜಿ ಹೆಚ್ಚು ಪುಣ್ಯಕ್ಷೇತ್ರವಾಗಿದೆ ಎನ್ನುತ್ತಾರೆ.
ವರುಣ ಊರು ಹಿಂದೆ ಚಾಲುಕ್ಯ ಸಾಮಂತರು ಮತ್ತು ಗಂಗರು, ಹೊಯ್ಸಳರು, ಮೈ ಸೂರಿನ
ಒಡೆಯರು ಆಳಿದ ಪ್ರದೇಶವಾಗಿದೆ. ಅವರ ಧಾರ್ಮಿಕ ಸ್ಮಾರಕಗಳು ಮತ್ತು ಇತರ ದೇವಾಲಯಗಳು
ಈ ಊರಿನಲ್ಲಿ ಇಂದಿಗೂ ಕಂಡುಬರುತ್ತವೆ, ಮತ್ತೊಂದು ಪ್ರಮುಖ ಊರು ವರಕೊಡು
ಸುಂದರವಾದ ಹೊಯ್ಸಳ ಕಾಲದ ವರದರಾಜ ಸ್ವಾಮಿ ದೇವಾಲಯ ಇದೆ ಮತ್ತು ಸುಂದರವಾದ
ಕಲ್ಯಾಣಿ ಇದೆ, ನನ್ನ ಆಸಕ್ತಿಯನ್ನು ಕೆರಳಿಸಿದ ಅಂಶ ನರಬಲಿ ಇದಕ್ಕೆ ಸಂಬಂಧಿಸಿದಂತೆ ಮೈಸೂರು
ಹತ್ತಿರ ಟಿ.ನರಸೀಪುರ ರಸ್ತೆಯ ಕೆರೆಯ ದಂಡೆ ಮೇಲಿರುವ ಕಲ್ಲಿನ ಮೇಲೆ ನರಬಲಿ ಕೊಡುವ
ಚಿತ್ರಗಳು ಕಂಡು ಬರುತ್ತದೆ, ಇದೇ ರೀತಿಯಾದ ಮತ್ತೊಂದು ಕುತೂಹಲಕರಿಯಾದ ಸ್ಥಳ ಚಿಕ್ಕಳ್ಳಿ
ಆಲದ ಮರ ಇದನ್ನು ಸ್ಥಳೀಯ ಜನರು ದೊಡ್ಡ ಆಲದ ಮರ ಎನ್ನುತ್ತಾರೆ. ಅದರ ಮಹತ್ವ ಎಲ್ಲರಿಗೂ
ತಿಳಿಸಲು ನಾನು ನೂರಾರು ವರ್ಷಗಳ ಇತಿಹಾಸ ಇರುವ ಈ ಪಾರಂಪರಿಕ ಆಲದ ಮರವನ್ನು
ತೆಗೆದುಕೊಳ್ಳಲು ಕಾರಣವಾಯಿತು ನಾನು ಈ ಸಂಶೋಧನೆ ಮಾಡಲು ಈ ಎಲ್ಲ ಪ್ರದೇಶಗಳಿಗೆ ನಾನೇ
ಸ್ವತಃ ಹಲವಾರು ಬಾರಿ ಭೇಟಿಕೊಟ್ಟು ಹೆಚ್ಚಿನ ಮಾಹಿತಿಯನ್ನು ತೆಗೆದುಕೊಂಡಿರುತ್ತೇನೆ. ನನ್ನ ಈ
ವಿಷಯಕ್ಕೆ ಸಂಬಂಧಿಸಿದಂತೆ ನನಗೆ ಅಗತ್ಯವಾದ ಮಾಹಿತಿಯನ್ನು ವಿವಿಧ ಮೂಲಗಳಿಂದ
ಸಂಗ್ರಹಿಸಿದ್ದೇನೆ, ಅವುಗಳಲ್ಲಿ ಆ ದೇವಾಲಯದ ಅರ್ಚಕರಿಂದ, ಊರಿನ ಹಿರಿಯರಿಂದ, ಅಲ್ಲಿನ
ನನ್ನ ಸ್ಥಳೀಯ ಸ್ನೇಹಿತರಿಂದ ಮಾಹಿತಿಯನ್ನು ತೆಗೆದುಕೊಂಡಿದ್ದೇನೆ. ಇದಲ್ಲದೆ ಇದಕ್ಕೆ
ಪೂರಕವಾದಂತಹ ಮಾಹಿತಿಯನ್ನು ದ್ವಿತೀಯ ಆಧಾರಗಳಾದ ಗೆಜಿಟಿಯರ ್ ಗ್ರಂಥಗಳಿಂದ
ಮಾಹಿತಿಯನ್ನು ತೆಗೆದುಕೊಂಡು ಈ ಸ್ಥಳಗಳ ಐತಿಹಾಸಿಕ ಪಾರಂಪರಿಕ ಮಾಹಿತಿಯನ್ನು ಕೂಡಿ
ಕರಿಸುವುದಕ್ಕೆ ಪ್ರಯತ್ನ ಮಾಡಿದ್ದೇನೆ.
1.ಚಾಮರಾಜನಗರದ ವಿಜಯ ಪಾರ್ಶ್ವನಾಥ ಬಸದಿ
ವಿಜಯ ಪಾರ್ಶ್ವನಾಥ ಬಸದಿ ಚಾಮರಾಜನಗರದ
ಜೈನ ತೀರ್ಥಂಕರ ಬಸದಿ ಆಗಿದೆ 29 ಮೇ ಕ್ರಿಸ್ತಶಕ
1116 ಸೋಮವಾರ ಇದನ್ನು ಕಟ್ಟಿಸಲಾಗಿದೆ.
ಹೊಯ್ಸಳ ರಾಜ ವಿಷ್ಣುವರ್ಧನ ಮಂತ್ರಿ ಸಂಧಿ
ವಿಗ್ರಹವು ಪುಣಿ ಸಮಯ ಇದನ್ನು ಕಟ್ಟಿಸಿದರು,
ಚಾಮರಾಜನಗರದ ಹಳೆಯ ಹೆಸರು ಅರಿಕುಟೀರ
ಎಂಬುದಾಗಿತ್ತು. ಮುಮ್ಮಡಿ ಕೃಷ್ಣರಾಜ ಒಡೆಯರ
ತಂದೆ ಚಾಮರಾಜ ಒಡೆಯರು ಹುಟ್ಟಿದ್ದು ಈ ಊರಿನಲ್ಲಿ
ಇವರ ಸ್ಮರಣಾರ್ಥ 1825 ರಲ್ಲಿ ಹೆಸರು ಬದಲಾವಣೆ
ಮಾಡಿದರು, ವಿಜಯ ಪಾರ್ಶ್ವನಾಥ ಬಸದಿ ಕಟ್ಟಲು
ಕಾರಣವೆಂದರೆ, ಚೋಳರ ಮೇಲೆ 1114 ರಲ್ಲಿ
ಹೊಯ್ಸಳರ ವಿಷ್ಣುವರ್ಧನ ಪಡೆದ ಗೆಲುವನ್ನು
ಸ್ಮರಣೀಯವಾಗಿರುವುದು ಇದರ ಸ್ಮರಣಾರ್ಥ ಇವನ
ಮಂತ್ರಿ ಪುಣಿ ಸಮಯ ವಿಜಯದ ನೆನಪಿಗಾಗಿ
ಗಂಗವಾಡಿ 96,000 ದಿಂದ ಚೋಳರನ್ನು
ಓಡಿಸಿದ್ದಕ್ಕಾಗಿ ಬಸದಿಯನ್ನು ಕಟ್ಟಿಸಿದನು.
ಜೈನ ಬಸದಿಯ ಸುಂದರವಾದ ಹೊರನೋಟ
ಮಾನಸ್ತಂಭ
ಮಾನಸ್ತಂಭ
ಬಸದಿಯ ಮುಂಭಾಗ ಸುಂದರವಾದ
ಮಾನಸ್ತಂಬ ಇದೆ ಮತ್ತು ಬಸದಿಯ
ಮುಂಭಾಗ ಸುಂದರವಾದ ಮಂಟಪವು
ಇದೆ. ಇದು ಮಂಟಪದಿಂದ ಹಬ್ಬ
ಉತ್ಸವಗಳಲ್ಲಿ ಮೆರವಣಿಗೆ ಮಾಡುವ
ಸಂದರ್ಭದಲ್ಲಿ ಈ ಮಂಟಪದಿಂದ
ಶುರುವಾಗುತ್ತಿತ್ತು. ಬಸದಿಯ ಬಾಗಿಲು
ಸುಂದರವಾಗಿದೆ ಜೈನ ತೀರ್ಥಂಕರರ
ಕೆತ್ತನೆ ಇದೆ, ವಿಜಯ ಪಾಶ್ವನಾಥ ಜೈನ
ತೀರ್ಥಂಕರರ ಕೆತ್ತನೆ ಇದೆ.
ಉತ್ಸವ ಮಂಟಪ
ಸುಂದರವಾದ ಮಂಟಪವು
ಇದೆ.ಇದು ಈ ಮಂಟಪದಿಂದ ಹಬ್ಬ
ಉತ್ಸವಗಳಲ್ಲಿ ಮೆರವಣಿಗೆ
ಮಾಡುವಾಗ ಈ ಮಂಟಪದಿಂದ
ಶುರುವಾಗುತ್ತಿತ್ತು .
ಸುಂದರವಾದ ಮಂಟಪವು
ಇದೆ.ಇದು ಈ ಮಂಟಪದಿಂದ ಹಬ್ಬ
ಉತ್ಸವಗಳಲ್ಲಿ ಮೆರವಣಿಗೆ
ಮಾಡುವಾಗ ಈ ಮಂಟಪದಿಂದ
ಶುರುವಾಗುತ್ತಿತ್ತು .
ದೇವಾಲಯದ ಪ್ರವೇಶ ದ್ವಾರ (ಬಾಗಿಲು)
ದೇವಾಲಯದ ಪ್ರವೇಶ ದ್ವಾರ (ಬಾಗಿಲು)
ವಿಜಯ ಪಾರ್ಶ್ವನಾಥ  
ಬಸದಿ ಒಳಭಾಗ
ವಿಜಯ ಪಾರ್ಶ್ವನಾಥ  
ಬಸದಿ ಒಳಭಾಗ
ವಿಜಯ ಪಾರ್ಶ್ವನಾಥ
ವಿಜಯ ಪಾರ್ಶ್ವನಾಥ
ವಿಜಯ ಪಾರ್ಶ್ವನಾಥ ಇಲ್ಲಿನ
ಗರ್ಭಗುಡಿಯಲ್ಲಿರುವ ವಿಗ್ರಹವು
ಅಪರೂಪದಾಗಿದೆ, ವಿಜಯ
ನೆನಪಿಗೋಸ್ಕರ ಕಟ್ಟಿದಂತಹ ತೀರ್ಥಂಕರ
ಆಗಿದೆ. ಇದು ಕರ್ನಾಟಕದಲ್ಲಿಯ
ಅಪರೂಪದ ಮತ್ತು ವಿಶೇಷ
ವಿಗ್ರಹವಾಗಿದೆ, ಈ ತೀರ್ಥಂಕರ ಹತ್ತಿರ
ನಾವು ಏನು ಕೇಳಿಕೊಂಡರು, ಅದು
ವಿಜಯ ಆಗುತ್ತದೆ ಎಂಬ ನಂಬಿಕೆಯಿದೆ.
ಪದ್ಮಾವತಿ ಅಮ್ಮನವರು
ಪದ್ಮಾವತಿ ಅಮ್ಮನವರು ಪಾಶ್ವನಾಥನ ಯಕ್ಷಿಣಿ
ಯಾಗಿದ್ದಾರೆ ಈ ಪದ್ಮಾವತಿಯ ದೇವರ ಮಹಿಮೆ ಅಂದರೆ
ಈ ದೇವರು ಕರ್ನಾಟಕದಲ್ಲಿ ಜೈನರಿಗೆ ಪ್ರಖ್ಯಾತಿ ಪಡೆದ
ಹೊಂಬುಜ ಪದ್ಮಾವತಿ ತರಹ ಇದು ಶಕ್ತಿ ದೇವತೆಯಾಗಿದೆ.
ಈ ದೇವತೆಯು ಕಷ್ಟವನ್ನು ನಿವಾರಿಸುವ
ದೇವಿಯಾಗಿದ್ದಾಳೆ, ಈ ದೇವರಿಗೆ ತಮಗೆ ತೊಂದರೆ
ಆದಾಗ ಹರಕೆಯನ್ನು ಕಟ್ಟಿಕೊಂಡರೆ ಅವರಿಗೆ ಕಷ್ಟಗಳು
ಪರಿಹಾರವಾಗುತ್ತದೆ. ಶ್ರಾವಣ ಮಾಸ ಮತ್ತು ವಿಶೇಷ
ಸಂದರ್ಭಗಳಲ್ಲಿ ವಿಶೇಷ ಪೂಜೆಯ ಈ ಪದ್ಮಾವತಿ
ಅಮ್ಮನವರಿಗೆ ಆಗುತ್ತವೆ, ಬಳೆ ಪೂಜೆ ಎಲೆ ಪೂಜೆ ಹೀಗೆ
ಹಲವು ರೀತಿಯಲ್ಲಿ ಪೂಜೆಗಳು ಆಗುತ್ತವೆ.
ಈ ಶಾಸನವು 1116 ಶಾಸನ ಆಗಿದೆ
ಈ ಶಾಸನವು ಕ್ರಿಸ್ತಶಕ 1116 ಶಾಸನ ಆಗಿದೆ.
ವಿಜಯ ಪಾರ್ಶ್ವನಾಥ ಬಸದಿಯಲ್ಲಿ ಶಾಸನವೊಂದು
ದೊರೆತಿದೆ. ಈ ಶಾಸನ ಹೊಯ್ಸಳರ ಮಂತ್ರಿ ಪುಣಿ
ಸಮಯ ವಂಶದವರ ಬಗ್ಗೆ ಮತ್ತು ಅವರ ಗುರು
ಅಜಿತ ಮುನಿಪನ ಬಗ್ಗೆ ಮಾಹಿತಿ ಹೊಂದಿದೆ.
ಇದಕ್ಕೆ ಎಣ್ಣೆ ನಾಡು ಕರೆಯುತ್ತಿದ್ದರು, ಹೊಯ್ಸಳರು
ಚೋಳರನ್ನು ಸೋಲಿಸಿದ್ದು ಜೈನ ಬಸದಿಗಳನ್ನು
ಜೀರ್ಣೋದ್ಧಾರ ಮಾಡಿ ಹೊಸ ಬಸದಿಗಳನ್ನು ಕಟ್ಟಿದ್ದ
ಹಲವು ರೀತಿಯ ಮಾಹಿತಿಯನ್ನು ಹೊಂದಿ. ಈ
ಶಾಸನದಲ್ಲಿ ಊರಿಗೆ ಅರೆಕುಟೀರ ಎಂದು
ಉಲ್ಲೇಖವಾಗಿದೆ, ಇದು ಚಾಮರಾಜನಗರದ
ಹಳೆಯ ಅರೆಕುಟೀರ ಎಂದು ಇದರಿಂದ ನಮಗೆ
ಗೊತ್ತಾಗುತ್ತದೆ.
ಪಾರ್ಶ್ವನಾಥನ ಸುಂದರ ವಿಗ್ರಹ ಕ್ಷೇತ್ರ ಪಾಲ ಬ್ರಹ್ಮದೇವರ ವಿಗ್ರಹ
ಜ್ವಾಲಾ ಮಾಲಿನಿ ದೇವಿ ನಿಷದಿ ಕಲ್ಲು
ಲಕ್ಕಿ ಮರ ಇದು ಪದ್ಮಾವತಿದೇವರ ಮರ ಆಗಿದೆ ಕುಶ್ಮಾಂಡನಿ ದೇವಿ
ಶಾಸನ - 1281 AD
ಶಾಸನ ಕ್ರಿಸ್ತಶಕ 1281 ಇದೇ
ಬಸದಿಯ ಪ್ರಕಾರದ ಪಶ್ಚಿಮದ
ದಿಕ್ಕಿನಲ್ಲಿ ಸುಮಾರು 25 ಡಿಸೆಂಬರ ್
1281 ಒಂದು ಹಾಕಿಸಿದ ಹೊಯ್ಸಳ
ರಾಜ ಮೂರನೇ ವೀರ ನರಸಿಂಹ
ಹಾಕಿಸಿದ ಶಾಸನ ಕಂಡುಬರುವುದು,
ಇದರಲ್ಲಿ ಬಸದಿಯ ನಿರ್ವಹಣೆಗೆ
ದಾನ ಕೊಟ್ಟಿರುವ ಮಾಹಿತಿ ಇದ್ದು
ಇದರ ಮೂಲಕ ಊರಿನ ಗೌಡ ಗಳಿಗೆ
ಆದೇಶ ಮಾಡಿದ ಅಂಶವನ್ನು ಈ
ಶಾಸನ ಒಳಗೊಂಡಿದೆ.
ವರುಣ ಗ್ರಾಮವು ಸಹ ಐತಿಹಾಸಿಕ ಗ್ರಾಮ ಆಗಿದ್ದು, ಈ ಪ್ರದೇಶವನ್ನು ಹಲವು
ಸಾಮಂತರು ಆಳಿದ್ದಾರೆ. ಇದು ಬಹಳ ಹಿಂದಿನಿಂದಲೂ ಪ್ರಖ್ಯಾತಿ ಪಡೆದ ಊರು
ಆಗಿದ್ದು ಇಲ್ಲಿ ಹಲವು ದೇವಾಲಯಗಳು ಬಸದಿಗಳು ಇಲ್ಲಿದ್ದವು. ಆದರೆ ಈಗ ಕೆಲವು
ಮಾತ್ರ ಉಳಿದಿವೆ ಮತ್ತು ಈ ಸ್ಥಳವನ್ನು ಚಾಲುಕ್ಯ ವಂಶದ ಶಾಖೆಯ ಸಾಮಂತ
ರಾಜರುಗಳು ಆಳುತ್ತಿದ್ದರು. ಅದರಲ್ಲಿ ಪ್ರಮುಖರು ದುರ್ಗ, ಗೊಗ್ಗಿ ,ನರಸಿಂಹ
ಪ್ರಮುಖರು ಇವರಲ್ಲಿ ನರಸಿಂಹ ಬಹುಶಃ ಪಂಪನ ಆಶ್ರಯದಾತನಾಗಿದ್ದ
ಅರಿಕೇಸರಿ ಯ ತಂದೆ ಇರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. 1919ರ
ಅರ್ಕಲಾಜಿಕಲ ್ ಇಲಾಖೆಯ ವಿದ್ವಾಂಸರು ಮಾಹಿತಿಯು ತಿಳಿಸುವುದು ದುರ್ಗ
ಆಡಳಿತಗಾರ ಎಂಬುವನು ಕ್ರಿಸ್ತಶಕ 900 ರಲ್ಲಿ ಇಲ್ಲಿದ್ದಿರಬಹುದು ಅದರ
ಪೂರಕವಾಗಿ ಅವನ ಕಾಲದ 7 ವೀರಗಲ್ಲುಗಳು ದೊರೆತಿವೆ, ಇನ್ನೊಬ್ಬ ಸಾಮಂತ
ಗೊಗ್ಗಿಯ ಮಗಳು ದೇವಗಿರಿ ಯಾದವರ ಬಿಲ್ಲಮ ನನ್ನು ವಿವಾಹವಾಗಿದ್ದಳು
ಎಂಬುದು ಶಾಸನಗಳಿಂದ ತಿಳಿದುಬರುವುದು. ನಿರಂತರ ಹೋರಾಟಗಳು
ಸಾಕ್ಷಿಯಾಗಿತ್ತು. ಏಕೆಂದರೆ ಗೌಡನು ಪಾಳೇಗಾರನಾಗಬೇಕು ಆಮೇಲೆ
ರಾಜನಾಗಬೇಕು ಎಂಬುದು ಪ್ರತಿಯೊಬ್ಬರ ಆಸೆಯಾಗಿತ್ತು.
2. ವರುಣ
ವರುಣ ಗ್ರಾಮದ ವಿಶೇಷತೆ
ಇವರಿನಲ್ಲಿ ಹಲವು ದೇವಾಲಯಗಳು
ಇದ್ದವು, ಅವುಗಳಲ್ಲಿ ಕೆಲವು
ಅಮೂಲ್ಯವಾದ ವಿಗ್ರಹಗಳನ್ನು ಕಳ್ಳ ಕಾಕರು
ಕದ್ದುಯ್ದಿದ್ದಾರೆ, ಮತ್ತು ಕೆಲವು ಉಳಿದ
ಅಲ್ಪಸ್ವಲ್ಪ ದೇವರ ವಿಗ್ರಹಗಳಲ್ಲಿ ಈಗಿನ
ವರುಣಾದ ದೇವೀರಮ್ಮನ ಮಂದಿರದ
ಹತ್ತಿರ ಇವೆ, ಶಾಸನವೊಂದರಲ್ಲಿ ಊರಿಗೆ
ಹೋನರ ಎಂಬ ಉಲ್ಲೇಖವಿದೆ,
ಗೆಜಿಟಿಯರಿನಲ್ಲಿ ಉಲ್ಲೇಖಿಸಿದಂತೆ ಎಂಬ
ಹೆಸರು ಇತ್ತು.
ವರುಣ
ಪುರಾತನ ವಿಗ್ರಹಗಳು
ಮಹಾಲಿಂಗೇಶ್ವರ ದೇವಸ್ಥಾನ
ಮಹಾಲಿಂಗೇಶ್ವರ ದೇವಾಲಯ
ಈ ಸ್ಥಳದಲ್ಲಿರುವ ಮಹಾಲಿಂಗೇಶ್ವರ ಗುಡಿ
ಪ್ರಾಚೀನ ಗುಡಿಯಾಗಿದೆ ಮೊದಲನೇದಾಗಿದೆ
10ನೇ ಶತಮಾನದ ಕಾಲಕ್ಕೆ ಸೇರಿದ್ದಾಗಿದೆ
ಚಿಕ್ಕದಾಗಿದ್ದರು ಸುಂದರವಾಗಿದೆ. 14
ಅಂಗಳದಷ್ಟು ಅಗಲವಿರುವ
ಶಿವಮೂರ್ತಿಗಳು ಮುಖಮಂಟಪ ಸುತ್ತ
ಪ್ರದಕ್ಷಿಣೆ ರೂಪದಲ್ಲಿ ಇದೆ ಆಮೇಲೆ
ದೇವಸ್ಥಾನದ ಗೋಡೆಗಳ ಮೇಲೆ
ಚಿತ್ರಗಳಿವೆ, ರಾಮಾಯಣದಲ್ಲಿ ಬರುವ
ಕಾಮಧೇನು ನಂದಿನಿ ಗೋವಿನ
ಅಪಹರಣ ಕಥಾಪ್ರಸಂಗವನ್ನು
ಇವುಗಳನ್ನು ಮೂಲಕ ನಿರೂಪಿಸಲಾಗಿದೆ.
ಜೈನ ವಿಗ್ರಹಗಳು
ದೇವತೆಯ ವಿಗ್ರಹ ಮತ್ತು ಶಾಸನ
ಮಹಾಲಿಂಗೇಶ್ವರದ
ದೇವಾಲಯ ಮುಂಭಾಗದಲ್ಲಿ
ಹಲವು ವಿಗ್ರಹಗಳಿವೆ,
ಅದರಲ್ಲಿ ವೀರಗಲ್ಲುಗಳು
ಮತ್ತು ರಾಜರಾಣಿ ಕುದುರೆ
ಮೇಲೆ ಬರುವ ಚಿತ್ರ,
ಮಹಿಳೆ ದೇವರಿಗೆ
ನಮಸ್ಕರಿಸಿರುವ ಚಿತ್ರ,
ಯೋಧರ ಕೈಯಲ್ಲಿ
ಆಯುಧವನ್ನು ಹಿಡಿದಿರುವ
ಚಿತ್ರಗಳು ಪ್ರಮುಖವಾಗಿವೆ.
ದೇವಿರಮ್ಮ ದೇವಾಲಯ
ದೇವಿರಮ್ಮ ದೇವಾಲಯ ಇಲ್ಲಿನ ಮತ್ತೊಂದು ಐತಿಹಾಸಿಕ ಮತ್ತು
ಧಾರ್ಮಿಕ ಕಟ್ಟಡ ದೇವಿರಮ್ಮ ದೇವಾಲಯ ಇದು ವರುಣ ಗ್ರಾಮದ
ಗ್ರಾಮ ದೇವತೆಯಾಗಿದ್ದು ಇದನ್ನು ಮುಮ್ಮಡಿ ಕೃಷ್ಣರಾಜ ಒಡೆಯರ
ಪತ್ನಿ ದೇವ ಮಣ್ಣಿ ಕಟ್ಟಿಸಿದರು. ಇದು ಸಹ ಪುರಾತನ ದೇವಾಲಯ
ಆಗಿದ್ದು ಗ್ರಾಮದ ಜನರು ಮತ್ತು ಅರ್ಚಕರು ಹೇಳುವ ಪ್ರಕಾರ
ರೋಗ ರುಜುನೆಗಳು ತೊಂದರೆಯಾಗದಂತೆ ದೇವಿಯು
ನೋಡಿಕೊಳ್ಳುತ್ತಿದ್ದಾಳೆ ಮತ್ತು ಊರನ್ನು ಕಾಪಾಡುತ್ತಾಳೆ ಎಂಬ
ಪ್ರತಿತಿ ಇದೆ. ಇಲ್ಲಿನ ವಿಶೇಷತೆಂದರೆ ಈ ದೇವಿಯ ದೇವಾಲಯದ
ಬಾಗಿಲನ್ನು 7 ವರ್ಷಕ್ಕೊಮ್ಮೆ ತೆಗೆಯುತ್ತಾರೆ ಸಂಕ್ರಾಂತಿ ಆದಮೇಲೆ
ಬಾಗಿಲು ತೆಗೆದರೆ ಒಂದು ತಿಂಗಳ ಶಿವರಾತ್ರಿವರೆಗೆ ದೇವಸ್ಥಾನದ
ಬಾಗಿಲು ತೆರೆದಿರುತ್ತದೆ ,ಒಳಗಡೆ ಹಚ್ಚಿದ ದೀಪವು ಏಳು
ವರ್ಷದವರೆಗೆ ಉರಿಯುತ್ತಿರುತ್ತದೆ ಮುಂದಿನ ಬಾರಿ ಬಾಗಿಲು
ತೆಗೆಯುವವರೆಗೆ ಅಲ್ಲಿ ದೇವಿಗೆ ಅರ್ಪಿಸಿದ ಹೂವು
ಬಾಡಿರುವುದಿಲ್ಲ.
ಮಹಾದೇಶ್ವರ ದೇವಸ್ಥಾನ
ಮಹದೇಶ್ವರ ದೇವಾಲಯ ಇಲ್ಲಿನ ಮತ್ತೊಂದು ಐತಿಹಾಸಿಕ ಸ್ಥಳ
ಮಹದೇಶ್ವರ ದೇವಾಲಯ ಇದನ್ನು ಕಟ್ಟಿಸಿದವರು, ಮುಮ್ಮಡಿ
ಕೃಷ್ಣರಾಜ ಒಡೆಯರು ಇವರು ಕಾಶಿಯಿಂದ ಮೂರು ಈಶ್ವರ
ಲಿಂಗವನ್ನು ತರಸಿ ಅದರಲ್ಲಿ ಒಂದನ್ನು ನಂಜನಗೂಡಿನಲ್ಲಿ
ಪ್ರತಿಷ್ಠಾಪಿಸಿದರು, ಇನ್ನೊಂದನ್ನು ಮೂಡಗ ತೊರೆ,
ಮತ್ತೊಂದನ್ನು ವರುಣದಲ್ಲಿ ಪ್ರತಿಷ್ಠಾಪಿಸಿದರು.
ನಂಜನಗೂಡು ,ಮುಡಗ ತೊರೆ ವಿಶ್ವವಿಖ್ಯಾತಿ ಪಡೆದಿದ್ದು ವರುಣ
ಈಶ್ವರ ಅಷ್ಟೊಂದು ಪ್ರಖ್ಯಾತಿಯನ್ನು ಪಡೆಯಲಿಲ್ಲ. ಈ ಲಿಂಗದ
ವಿಶೇಷವೆಂದರೆ ಇದು ಚಿಕ್ಕದಾಗಿದೆ, ನಂಜನಗೂಡು ದೇವಸ್ಥಾನ
ತರಹ ಇದೆ ಕಾಲಕಾಲಕ್ಕೆ ತಕ್ಕಂತೆ ಇದು ಮಳೆಗಾಲ, ಚಳಿಗಾಲ,
ಬೇಸಿಗೆಯ ಕಾಲದಲ್ಲಿ ಲಿಂಗದ ಬಣ್ಣ ಬದಲಾವಣೆ ಆಗುತ್ತದೆ.
ಮಾದೇಶ್ವರ ದೇವಾಲಯದ ಗೋಡೆಯ ಮೇಲೆ ಕೃಷ್ಣರಾಜ
ಒಡೆಯರ ಶಾಸನವಿದ್ದು, ಈ ದೇವಾಲಯ ನಿರ್ಮಾಣದ
ಹಿನ್ನೆಲೆಯ ಮಾಹಿತಿ ಹೊಂದಿದೆ ದೇವಸ್ಥಾನ ತುಂಬಾ
ಸುಂದರವಾಗಿದೆ.
ದೇವಾಂಬುದ್ಧಿ ಕೆರೆ
ದೇವಬುದ್ಧಿ ಕೆರೆ ವರುಣಾದ ಮತ್ತೊಂದು ಆಕರ್ಷಣೆ ಎಂದರೆ, ಇಲ್ಲಿನ ದೇವಂ ಬುದ್ಧಿ ಕೆರೆ ಈ ಕೆರೆ ಇದನ್ನು
ಜೀರ್ಣೋದ್ಧಾರ ಕ್ರಿಸ್ತಶಕ 1827ರಲ್ಲಿ ರಾಣಿ ದೇವಾಜಮಣಿ ಮಾಡಿಸಿರುತ್ತಾರೆ. ಈ ಕೆರೆ ನೋಡಲು ತುಂಬಾ
ಸುಂದರವಾಗಿದೆ ದೊಡ್ಡದಾಗಿದೆ, ಈ ಕೆರೆ ಹತ್ತಿರ ಒಂದು ಮಂಟಪ ಸಹ ಇದೆ, ಇದರಿಂದ ಸುತ್ತಮುತ್ತಲಿನ ಹಲವು
ಹಳ್ಳಿಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲಾಗಿದೆ, ಊರು ಬೆಳೆಯಲು ಮೂಲ ಕಾರಣವಾಗಿರಬಹುದು.
ಕೃಷಿ ಭೂಮಿ
ಈ ಸ್ಥಳದಲ್ಲಿ ಬೌದ್ಧಮತಿಯವಾದ ಮದ ಗಜೇಂದ್ರ ಎಂಬುವವನು ಗಂಗರ ಆಸ್ಥಾನಕ್ಕೆ ಬಂದು ತನ್ನ
ಪಾಂಡಿತ್ಯದ ಹಮ್ಮ ನಿಂದ ಇಲ್ಲಿ ಸ್ಥಳೀಯ ಆಸ್ಥಾನದ ಪಂಡಿತರಿಗೆ ಸವಾಲನ್ನು ಹಾಕಿ ನನ್ನನ್ನು ಸೋಲಿಸಿದವರು,
ಯಾರು ಇದ್ದಾರೆ ಬನ್ನಿ ಎಂದಾಗ ವಾದ ವಿವಾದದಲ್ಲಿ ವಾದಿಮತ ಗಜೇಂದ್ರನನ್ನು ಮಾಧವ ್ ಭಟ್ಟರು ಎಂಬ
ಬ್ರಾಹ್ಮಣ ಸೋಲಿಸಿದರು, ಇದಕ್ಕೆ ಪ್ರತಿಯಾಗಿ ರಾಜ ಹರಿವರ್ಮನ್ನು ಈ ವರಕೊಡು ಗ್ರಾಮವನ್ನು ಅವರಿಗೆ
ಕಾಣಿಕೆಯಾಗಿ ಕೊಟ್ಟನು. ಅನಂತರದಲ್ಲಿ ಈ ಗ್ರಾಮವು ಬಹುಶಃ ಬ್ರಾಹ್ಮಣ ಅಗ್ರಹಾರವಾಗಿ
ಅಭಿವೃದ್ಧಿಯಾಗಿರಬೇಕು, ಈ ಊರು ಸಹ ಅನಂತರದಲ್ಲಿ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವನ್ನು
ಮುಂದುವರಿಸಿಕೊಂಡು ಬಂದಿದೆ. ಅದಕ್ಕೆ ಸಾಕ್ಷಿ ಎಂಬಂತೆ ಅಲ್ಲಿರುವ ಸ್ಮಾರಕಗಳು ಇಂದಿಗೂ ಅವು ಅವು
ಐತಿಹಾಸಿಕತೆಯನ್ನು ತಿಳಿಸಿಕೊಡುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳು ವರ ್ ಕೊಡು ವರದರಾಜ ಸ್ವಾಮಿ
ದೇವಾಲಯ ವರದರಾಜ ಮಂದಿರ ಈ ಊರಿನಲ್ಲಿರುವ ಪ್ರಮುಖ ದೇವರು ವರದರಾಜೇಂದ್ರ ವಿಷ್ಣು ದೇವರು
ಈ ದೇವಸ್ಥಾನ ಹೊಯ್ಸಳರ ಕಾಲದ್ದು ಸುಮಾರು 750 ವರ್ಷ ಪುರಾತನ ದೇವಸ್ಥಾನವಾಗಿದೆ. ಈಗ ಪುಟ್ಟ
ಗ್ರಾಮ ಹಿಂದೆ ಪ್ರಖ್ಯಾತಿಯಾಗಿತ್ತು. ಈ ಊರು ಚಿಕ್ಕ ದೇವರಾಜ, ದೊಡ್ಡ ದೇವರಾಜ ಕಾಲದಲ್ಲಿ ಪ್ರಖ್ಯಾತಿ
ಪಡೆದಂತಹ ಊರಾಗಿತ್ತು, ಅನೇಕ ರಾಜರುಗಳಿಂದ ದೇವಾಲಯಕ್ಕೆ ಕಾಣಿಕೆ ದಾನ ಕೊಟ್ಟಿರುತ್ತಾರೆ, ವರದರಾಜ
ದೇವಾಲಯವನ್ನು ಇತ್ತೀಚಿಗೆ 2019ರಲ್ಲಿ ಹೊಸದಾಗಿ ಕಟ್ಟಿದ್ದಾರೆ, ದೇವಸ್ಥಾನದಲ್ಲಿ ಗೋಪುರ ಇದೆ.
ಆಂಜನೇಯ, ಗಣೇಶ, ಶ್ರೀದೇವಿ, ಭೂದೇವಿ, ದೇವರ ತುಳಸಿ ಕಟ್ಟೆ ವಿಶೇಷವಾಗಿದೆ, ಹಿಂದೆ ಹಳೆ ಕಾಲದಲ್ಲಿ
ಅಡುಗೆ ಮಾಡಿ ಪ್ರಸಾದ ಕೊಡಲು ದೊಡ್ಡದಾದ ಕಲ್ಲಿನ ಪಾತ್ರೆ ಇದೆ ವಿಶೇಷವಾಗಿ ಎಂದರೆ ಇಲ್ಲಿ ಚಿಕ್ಕ ಗಣೇಶ ಇದೆ
ಗಣೇಶ ಯಾಕೆ ಚಿಕ್ಕದಾಗಿದೆ, ಅಂದರೆ ಬಡವರಿಗೂ ಬೆಣ್ಣೆಯ ಅಭಿಷೇಕ ಹಲವು ಪೂಜೆ ಮಾಡಲು
ಅನುಕೂಲವಾಗಲು ಚಿಕ್ಕದಾಗಿದೆ ದೇವಾಲಯವು ಬಹಳ ಸುಂದರವಾಗಿದೆ.
3. ವರಕೋಡು 
ವರಕೊಡು ವರದರಾಜ ಸ್ವಾಮಿ ದೇವಾಲಯ
ವರದರಾಜ ಸ್ವಾಮಿಯ ದೇವಾಲಯದ ಒಳನೋಟ
ಗಣೇಶ, ಆಂಜನೇಯ, ಕೃಷ್ಣ
ವರದರಾಜ ಸ್ವಾಮಿಯ ಪುರಾತನ ಮೂಲ ವಿಗ್ರಹ ಈಗ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿರುವ
ವಿಗ್ರಹ
ಕಲ್ಯಾಣಿ
4. ತಿರುಮಕೂಡಲು ನರಸೀಪುರ
ತಿರುಮಕೂಡಲು ನರಸೀಪುರ ಈ ಪ್ರದೇಶವು ಐತಿಹಾಸಿಕವಾಗಿ ಪ್ರಸಿದ್ಧವಾಗಿದೆ. ಈ ಊರು
ಹಿಂದಿನಿಂದಲೂ ಧಾರ್ಮಿಕ ಕ್ಷೇತ್ರವಾಗಿದೆ, ಈ ಸ್ಥಳವು ಶೈವ, ವೈಷ್ಣವ, ಜೈನ ಕ್ಷೇತ್ರವಾಗಿದೆ ಮತ್ತು
ಇತರ ಎಲ್ಲರಿಗೂ ಸ್ಥಳ ಪವಿತ್ರವಾಗಿದೆ. ಪ್ರಾಚೀನ ಕಾಲದಿಂದಲೂ ಎಲ್ಲ ಧರ್ಮದವರು ಈ
ಊರಿನಲ್ಲಿ ಇದ್ದರು ಇದು ತ್ರಿವೇಣಿ ಸಂಗಮವಾಗಿದೆ, ಕಾವೇರಿ, ಕಪಿಲ, ಸ್ಪಟಿಕ ಸರೋವರ ಮೂರು
ವರ್ಷಕ್ಕೊಮ್ಮೆ ಕುಂಭಮೇಳ ನಡೆಯುತ್ತದೆ. ಶಂಕರಾಚಾರ್ಯರು 6 ತಿಂಗಳು ಕಾಲ ತಪಸ್ಸು ಈ
ಪ್ರದೇಶದಲ್ಲಿ ಆಚರಿಸುತ್ತಾರೆ, ಹೀಗೆ ಹಲವು ರೀತಿಯಿಂದ ಇದು ಪುಣ್ಯಕ್ಷೇತ್ರವಾಗಿದೆ ಮತ್ತು ಕಾಶಿಗಿಂತ
ಪವಿತ್ರ ಅಂತ ಹೇಳುತ್ತಾರೆ. ಈ ಕ್ಷೇತ್ರಕ್ಕೆ ಭೇಟಿ ಕೊಟ್ಟರೆ ಕಾಶಿಗಿಂತ ಪುಣ್ಯ ಅಂತ ಹೇಳುತ್ತಾರೆ. ಪ್ರಮುಖ
ದೇವಾಲಯಗಳು ಅಗಸ್ತೇಶ್ವರ ದೇವಾಲಯ,ಹನುಮಂತೇಶ್ವರ ದೇವಾಲಯ, ಗುಂಜಾಂ
ನರಸಿಂಹಸ್ವಾಮಿ ದೇವಾಲಯ ಮೊದಲನೇದಾಗಿ ಅಗಸ್ತ್ಯೇಶ್ವರ ದೇವಾಲಯ ಪುರಾಣದ ಪ್ರಕಾರ
ಅಗಸ್ತ್ಯ ಮುನಿಗಳಿಂದ ಲಿಂಗ ಸ್ಥಾಪನೆ ಆಯಿತು ಎಂದು ಹೇಳುತ್ತಾರೆ.
ಅಗಸ್ತ್ಯೇಶ್ವರ ದೇವಾಲಯ
ಅಗಸ್ತ್ಯ ಮುನಿ
ಈ ದೇವಾಲಯವನ್ನು 10ನೇ ಮತ್ತು 11 ಶತಮಾನದ ಅಂತ್ಯಕಾಲದಲ್ಲಿ ಕಟ್ಟಿದ್ದಾರೆಂದು
ನಂಬಲಾಗಿದೆ. ನಂತರ ಹೊಯ್ಸಳ, ವಿಜಯನಗರ, ಮೈಸೂರು ಅರಸರು ಕಾಲ ಕಾಲಕ್ಕೆ
ಜೀರ್ಣೋದ್ಧಾರ ಮಾಡಿದ್ದಾರೆ. ಅಗಸ್ತ್ಯೇಶ್ವರ ಗುಡಿಯ ಬಗ್ಗೆ ಇತಿಹಾಸ ಅಗಸ್ತ್ಯ ಮುನಿಗಳು
ಹನುಮಂತನಿಗೆ ಕಾಶಿಯಿಂದ ಲಿಂಗ ತೆಗೆದುಕೊಂಡು ಬಾ ಎಂದು ಹೇಳುತ್ತಾರೆ, ಹನುಮಂತ
ಕಾಶಿಯಿಂದ ಲಿಂಗ ತರುವುದು ಸ್ವಲ್ಪ ತಡ ಆಗುತ್ತದೆ, ಆವಾಗ ಅಗಸ್ತ್ಯ ಮುನಿಗಳು ಆ ನದಿಯ
ಮರಳಿನಲ್ಲಿ ಇದ್ದಂತ ಮರಳಿನಿಂದ ಲಿಂಗವನ್ನು ಮಾಡುತ್ತಾರೆ, ಆಗ ಹನುಮಂತ ಬಂದು ಲಿಂಗ
ನೋಡಿದಾಗ ಕೋಪಗೊಂಡು ಲಿಂಗಕ್ಕೆ ತನ್ನ ಕೈ ನಿಂದ ವಜ್ರಮುಷ್ಟಿಯಿಂದ ಲಿಂಗಕ್ಕೆ
ಹೊಡೆಯುತ್ತಾನೆ, ಲಿಂಗವು ಮೇಲಿನ ಭಾಗ ಹೊಡೆಯುತ್ತದೆ ಆಗ ಅದರಲ್ಲಿ ನೀರು ಬರುತ್ತದೆ,
ಹನುಮಂತ ಮೂರ್ಚೆ ಬೀಳುತ್ತಾನೆ ಅದೇ ನೀರಿನಿಂದ ಆಂಜನೇಯನ ಮುಖಕ್ಕೆ ನೀರು
ಹಾಕುತ್ತಾರೆ, ಮುನಿಗಳು ಹನುಮಂತನು ಎಚ್ಚರವಾಗುತ್ತಾನೆ, ಅವಾಗ ಆಂಜನೇಯ
ತಂದಂತಹ ಲಿಂಗವನ್ನು ಪಕ್ಕದಲ್ಲಿ ಸ್ಥಾಪನೆ ಮಾಡುತ್ತಾರೆ ಅದೇ ಈಗ ಹನುಮಂತೇಶ್ವರ
ದೇವಾಲಯ ಆಗಿದೆ ಮತ್ತು ವಿಶೇಷ ಅಂದ್ರೆ ಅಗಸ್ತ್ಯ ಮುನಿಗಳಿಂದ ಸ್ಥಾಪಿತ ಲಿಂಗದಿಂದ ನೀರು
ಬರುತ್ತದೆ, ಇದೇ ನೀರಿನಿಂದ ಈಗಲೂ ಜನರಿಗೆ ಪ್ರಸಾದ ರೀತಿಯಲ್ಲಿ ಕೊಡುತ್ತಾರೆ.
ಸುಂದರವಾದ ಕಂಬಗಳು ಮತ್ತು ದೊಡ್ಡದಾದ ಬಾಗಿಲು ಮತ್ತು ದೇವಸ್ಥಾನ ಮುಂಭಾಗ
ದೊಡ್ಡದಾದ ದೀಪದ ಕಂಬವಿದೆ ಮತ್ತು ದೇವಸ್ಥಾನ ಪಕ್ಕ ಅರಳಿ ಮರ ಇದೆ ಅಶ್ವತ ್ ಮರ
ಪುರಾತನ ಆಗಿದೆ ಮತ್ತೆ ಪಕ್ಕದಲ್ಲಿ ವ್ಯಾಸರಾಯ ಮಠ ಇದೆ.
ಹನುಮಂತೇಶ್ವರ ದೇವಸ್ಥಾನ
ಆಂಜನೇಯ ಕಾಶಿಯಿಂದ ತಂದಂತಹ ಲಿಂಗ
ಆಂಜನೇಯ ಕಾಶಿಯಿಂದ
ತಂದಂತಹ ಲಿಂಗವನ್ನು ಈ
ಸ್ಥಳದಲ್ಲಿ ಸ್ಥಾಪನೆ ಮಾಡುತ್ತಾರೆ.
ಅದೇ ಈಗ ನಾವು ಆಂಜನೇಯ
ಕಾಶಿಯಿಂದ ತಂದಂತಹ
ಶಿವಲಿಂಗವನ್ನು ಈ ಜಾಗದಲ್ಲಿ
ಪ್ರತಿಷ್ಠಾಪನೆ ಮಾಡುತ್ತಾರೆ,
ಆದ್ದರಿಂದ ಈ ಲಿಂಗವು ಬಹು
ಮುಖ್ಯವಾಗಿದೆ ಈ ಲಿಂಗವು
ನೋಡಲು ಬಹಳ
ಸುಂದರವಾಗಿದೆ ಮತ್ತು
ದೊಡ್ಡದಾಗಿದೆ.
ಹನುಮಂತೇಶ್ವರ ದೇವಸ್ಥಾನ
ಆಗಿದೆ.
ಭಿಕ್ಷೆಶ್ವರ ದೇವಾಲಯ
ಗುಂಜಾಂ ನರಸಿಂಹಸ್ವಾಮಿ ದೇವಾಲಯ ಈ ದೇವಾಲಯ ಒಬ್ಬ ಅಗಸನಿಂದ ನಿರ್ಮಿತವಾಯಿತು,
ಎಂದು ಹೇಳುತ್ತಾರೆ ಪೌರಾಣಿಕ ಹಿನ್ನೆಲೆ ಈ ದೇವಾಲಯ ಬಗ್ಗೆ ಹೇಳುವುದಾದರೆ ಅಗಸನಿಗೆ ಒಂದು
ಹುತ್ತದಲ್ಲಿ ವಿಗ್ರಹ ಸಿಕ್ಕಿತು ಕಟ್ಟಲು ಹಣವಿರಲಿಲ್ಲ, ಆದರೆ ಅವನು ಬಟ್ಟೆ ತೊಳೆಯುವ ಕಲ್ಲಿನ ಕೆಳಗಡೆ
ನಿಧಿ ಸಿಕ್ಕಿತು, ಈ ನಿಧಿಯಿಂದ ದೇವಾಲಯವನ್ನು ಕಟ್ಟಿದ ಆದರೆ ಅವನಿಗೆ ಕಾಶೀಗೆ ಹೋಗಿ ಪುಣ್ಯವನ್ನು
ತೆಗೆದುಕೊಂಡು ಬರಬೇಕಂತ ಆಸೆಯಾಗುತ್ತದೆ. ಆಗ ಅವನು ದೇವರನ್ನು ಕೇಳಿದಾಗ ಸಾಕ್ಷಾತ ್
ನರಸಿಂಹ ಸ್ವಾಮಿ ಅವರೇ ಬಂದು ಈ ಕ್ಷೇತ್ರ ಕಾಶಿಗಿಂತ ಒಂದು ಗುಲಗಂಜಿಗೆ ಹೆಚ್ಚು ಪುಣ್ಯಕ್ಷೇತ್ರ
ವಾಗಲಿ ಅಂತ ತನ್ನ ಕೈಯಲ್ಲಿ ತಕ್ಕಡಿ ಮತ್ತು ಗುಲಗಂಜಿಯನ್ನು ಹಿಡಿದಿದ್ದಾರೆ. ಈ ದೇವಸ್ಥಾನಕ್ಕೆ ಭೇಟಿ
ಕೊಟ್ಟರೆ ಕಾಶಿಗಿಂತ ಪುಣ್ಯ ಎಂದು ಹೇಳುತ್ತಾರೆ, ಈಗಿರುವ ದೇವಾಲಯವು ವಿಜಯನಗರ ಕಾಲದ್ದು
ರಚನೆಯಾಗಿದೆ, ಗರ್ಭಗೃಹದಲ್ಲಿ ನರಸಿಂಹ ವಿಗ್ರಹವಿದೆ ಬಲಗೈಯಲ್ಲಿ ಮರದ ಗುಲಗಂಜಿ, ಮರದ
ರೆಂಬೆ ಹಿಡಿದ ನರಸಿಂಹ ಶಿಲ್ಪವಿದೆ, ಗರ್ಭಗೃಹ ಅಂತರಾಳದ ಮುಂದೆ ವಿಶಾಲವಾದ ನವರಂಗ ಇದೆ.
ಗುಂಜಾಂ ನರಸಿಂಹಸ್ವಾಮಿ ದೇವಾಲಯ
ಗುಂಜಾಂ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ
ದೇವಾಲಯದ ಹೊರನೋಟ
ದೇವಾಲಯದ ಮುಖ್ಯ ಬಾಗಿಲು ಒಳಭಾಗ
ರಂಗಮಂಟಪ ಈ ದೇವಾಲಯದಲ್ಲಿ ರಂಗ
ಮಂಟಪ ಇದ್ದು ಇದು ವಿಜಯನಗರ ಶೈಲಿಯಲ್ಲಿ
ನಿರ್ಮಾಣಗೊಂಡಿದೆ, ಕಂಬದ ಮೇಲೆ
ರಾಮಾಯಣ, ಕೃಷ್ಣ ,ವಾಮನ, ಆಂಜನೇಯ,
ಗರುಡ ಚಿತ್ರಗಳು ಇವೆ, ಅಲ್ಲದೆ ಸುಂದರವಾದ
ದ್ವಾರಪಾಲಕರು, ಮಹಿಳೆಯರು ಮತ್ತು ಕೃಷ್ಣನ
ಆಟಗಳು ಕೆತ್ತಲ್ಪಟ್ಟಿವೆ ಇದರ ಮುಂಭಾಗದಲ್ಲಿ
ಗರುಡನ ವಿಗ್ರಹವಿದೆ.
ರಂಗಮಂಟಪ
ಕೃಷ್ಣ
ರಾಮ
ವಾಮನ
ಮತ್ಸ್ಯಾವತಾರ
ಉತ್ಸವ
ಈ ದೇವಾಲಯದ ಪ್ರಾಂಗಣದಲ್ಲಿ
ರಾಮಾನುಚಾರ್ಯರು ಮತ್ತು
ನಮ್ಮಳ್ವಾರ ಅವರ ಸನ್ನಿಧಿ ಇದೆ.
ಏಕೆಂದರೆ ಇವರು ವೈಷ್ಣವ ಧರ್ಮವನ್ನು
ಪ್ರಖ್ಯಾತಿಗೊಳಿಸಿದವರು ಮತ್ತು ವಿಷ್ಣುವಿನ
ಪರಮಭಕ್ತರಾಗಿದ್ದರು.
ರಾಮಾನುಚಾರ್ಯರು 12ನೇ
ಶತಮಾನದಲ್ಲಿ ಕರ್ನಾಟಕಕ್ಕೆ ಬಂದು
ವೈ ಷ್ಣವ ಧರ್ಮವನ್ನು
ಪ್ರಖ್ಯಾತಿಗೊಳಿಸಿದರು ಹಲವು ವೈಷ್ಣವ
ದೇವಾಲಯಗಳನ್ನು ಕಟ್ಟಿಸಿದರು.
ಈ ಕಂಬದ ಮಹತ್ವ
ಈ ಕಂಬದ ಮಹತ್ವ ವಿಶೇಷವೆಂದರೆ ಕಂಬದ
ಮೇಲೆ ಹಲ್ಲಿಯ ಚಿತ್ರವಿದೆ, ಇದನ್ನು ಇಲ್ಲಿಗೆ
ಬರುವ ಭಕ್ತರು ಅದನ್ನು ಮುಟ್ಟಿ ನಮಸ್ಕಾರ
ಮಾಡುತ್ತಾರೆ ಆಶೀರ್ವಾದ ಪಡೆಯುತ್ತಾರೆ.
ಏಕೆಂದರೆ ಹಿಂದೆ ಹಲ್ಲಿ ನಮ್ಮ ಮೇಲೆ ಬಿದ್ದರೆ
ಅದರ ದೋಷ ಪರಿಹಾರಕ್ಕೆ ಕಂಚಿಗೆ
ಹೋಗುತ್ತಿದ್ದರು, ಆದರೆ ಇಲ್ಲಿನವರಿಗೆ
ಕಂಚಿಯು ಬಹು ದೂರದ ಪ್ರಯಾಣ ಅಂದು
ಅಲ್ಲಿಗೆ ಹೋಗುವ ಬದಲು ಇಲ್ಲಿ ಬಂದು
ದರ್ಶನ ಪಡೆದರೆ ದೋಷ ವಿಮುಕ್ತಿ ಆಗುತ್ತದೆ
ಎಂದು ಜನರ ನಂಬಿಕೆಯಾಗಿದೆ.
ಹಲ್ಲಿಯ ಚಿತ್ರವಿರುವ ಕಂಬ
ಉಗ್ರ ನರಸಿಂಹ
ನರಸೀಪುರದಲ್ಲಿ ಪುರಾತನ ಜೈನ ವಿಗ್ರಹ
ನರಸೀಪುರದಲ್ಲಿ ಪುರಾತನ ಜೈನ ವಿಗ್ರಹ ಸಂತೆ ಮಾಳ
ಪ್ರದೇಶದ ಮೂಲ ಸ್ಥಾನೇಶ್ವರ ದೇವಸ್ಥಾನದ
ಹಿಂಭಾಗದಲ್ಲಿರುವ ಅರಳಿ ಮರದ ಕೆಳಗಡೆ ಒಂದು
ಜೈನ ತೀರ್ಥಂಕರ ವಿಗ್ರಹ ಇದೆ. ಇಲ್ಲಿ ಯಾವುದೇ
ಬಸದಿಯು ಇದ್ದಿರಲಿಲ್ಲ ಆದ್ದರಿಂದ ಈ ವಿಗ್ರಹವನ್ನು ಬೇರೆ
ಕಡೆಯಿಂದ ತಂದಿಟ್ಟಿರಬಹುದು, ಇದರಿಂದ ಇಲ್ಲಿ ಜೈನ
ಬಸದಿಗಳು ಇದ್ದವು ಆದರೆ ಕಾಲ ನಂತರ ಅವು ಇಲ್ಲ
ಎಂಬುದು ಈ ವಿಗ್ರಹದಿಂದ ಗೊತ್ತಾಗುತ್ತದೆ ಏಕೆಂದರೆ
ಗಂಗಮನೆತನದ ಹಲವು ರಾಜರು ಜೈನ ಧರ್ಮಕ್ಕೆ
ಆಶ್ರಯದಾತರಾಗಿದ್ದರು, ಚಾವುಂಡರಾಯನು ಇದೆ
ಪ್ರದೇಶವನ್ನಾಗಿದ್ದ ಆದ್ದರಿಂದ ಈ ಕಾಲದಲ್ಲಿ ಇಲ್ಲಿ
ಹಲವು ಜೈನ ಬಸದಿಗಳು ಇದ್ದವು ಇದು ಒಂದು
ಉದಾಹರಣೆ.
ಈ ಊರಿನಲ್ಲಿ ಭಕ್ತ ಪ್ರಹ್ಲಾದ ನಾಟಕವನ್ನು
ಯಾರು ಮಾಡುವುದಿಲ್ಲ, ಏಕೆಂದರೆ ಈ ನಾಟಕ
ಮಾಡಿದವರಿಗೆ ತೊಂದರೆಯಾಗುತ್ತದೆ
ಎಂಬುದು ಜನರ ನಂಬಿಕೆಯಾಗಿದೆ. ಹಿಂದೆ ಈ
ಊರು ಪ್ರಸಿದ್ಧವಾಗಿತ್ತು ಈಗಲೂ ಪ್ರಸಿದ್ಧವಾಗಿದೆ
ಏಕೆಂದರೆ ಮಹಾನ ್ ವ್ಯಕ್ತಿಗಳಾದ ಅಗಸ್ತ್ಯ
ಮುನಿಗಳು, ಶಂಕರಾಚಾರ್ಯರು ಹಲವು
ಸಂತರು ಬಂದು ಈ ಪ್ರದೇಶದಲ್ಲಿ ಇದ್ದು ತಮ್ಮ
ತಪಸ್ಸನ್ನು ಆಚರಿಸುವಂತಹ ಈ ನರಸೀಪುರ
ಪ್ರದೇಶವು ಐತಿಹಾಸಿಕವಾಗಿ ಪ್ರಸಿದ್ಧವಾಗಿದೆ.
ಗರ್ಗೇಶ್ವರಿ ದೇವಾಲಯ
ಗರ್ಗೇಶ್ವರಿ ವಿಗ್ರಹ
ಗರ್ಗೇಶ್ವರಸ್ವಾಮಿ ದೇವಾಲಯ ಇರುವುದು
ನರಸೀಪುರದಿಂದ ಸ್ವಲ್ಪ ದೂರದಲ್ಲಿ ಗರ್ಗೇಶ್ವರಿ
ಎಂಬ ಊರು ದೇವಾಲಯವು
ಗರ್ಗಾಚಾರ್ಯರಿಂದ ಇದು ಸ್ಥಾಪನೆ ಆಯಿತು
ಅನ್ನುತ್ತಾರೆ. ಇದು ಶಿವ ಪಾರ್ವತಿ ದೇವಾಲಯ
ಆಗಿದೆ ಮತ್ತು ದೇವಸ್ಥಾನದ ಹೊರಗಡೆ ಶಿವ
ಪಾರ್ವತಿಯ ಸುಂದರವಾದ ಚಿತ್ರವಿದೆ, ಅರ್ಚಕರು
ಹೇಳುವ ಪ್ರಕಾರ ಇಲ್ಲಿನ ಲಿಂಗವು ಬೆಳೆಯುತ್ತಾ
ಹೋಗುತ್ತಿದೆ ಎನ್ನುತ್ತಾರೆ.
ಪ್ರಶ್ನೆ ಮಹಾಗಣಪತಿ
ಪ್ರಶ್ನೆ ಮಹಾಗಣಪತಿ ಈ ಗಣೇಶ ಹೆಸರು ಯಂತ್ರ ಪ್ರಶ್ನೆ
ಮಹಾ ಗಣಪತಿ ಇದನ್ನು ಶಂಕರಾಚಾರ್ಯರು ಪ್ರತಿಷ್ಠಾಪನೆ
ಮಾಡಿದ್ದಾರೆ ಎಂದು ಹೇಳುತ್ತಾರೆ. ಶ್ರೀ ಗಣಪತಿಗೆ ಯಂತ್ರ
ಹಾಕಿದ್ದಾರೆ ಎಂದರೆ ಭಕ್ತರ ಕೋರಿಕೆಗಳು, ಅವರ ತೊಂದರೆ
ನಿವಾರಣೆ ಮಾಡುವ ಶಕ್ತಿ ತುಂಬಿದ್ದಾರೆ, ಈ ಗಣೇಶ ವಿಶೇಷ
ಅಂದರೆ ಗಣಪತಿಯು 5 ರಿಂದ 6 ಕೆಜಿ ಇದೆ ಇದನ್ನು
ಎತ್ತಬಹುದು ಆದರೆ ನಮ್ಮ ಮನಸ್ಸಿನಲ್ಲಿ ಏನು ಪ್ರಶ್ನೆ
ಹಾಕಿದ್ದೇವೆ ಅದು ಸುಲಭವಾಗಿ ಆಗುವ ಹಾಗಿದ್ದರೆ ಗಣೇಶ
ಮೂರ್ತಿಯನ್ನು ಹಗುರವಾಗಿ ಎತ್ತಬಹುದಾಗಿದೆ, ನಮ್ಮ
ಕೆಲಸ ಆಗುವುದು ನಿಧಾನವಾಗುವುದಾದರೆ ಅಥವಾ ಸ್ವಲ್ಪ
ಕಷ್ಟ ಇದ್ದಾಗ ಅದು ಕೈಯಲ್ಲಿ ಎತ್ತುವಾಗ ಭಾರ ಎನಿಸುತ್ತದೆ,
ಇದು ಶನಿವಾರ, ಭಾನುವಾರ ಮಾತ್ರ ಭಕ್ತರಿಗೆ ತಾವೇ
ಪರೀಕ್ಷಿಸಿಕೊಳ್ಳಲು ಅವಕಾಶವಿರುತ್ತದೆ ಅದಕ್ಕೆ ರೂ 50
ನೀಡಬೇಕಾಗುತ್ತದೆ.
ಈ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾದಂತಹ ದೀಕ್ಷಿತ ್
ಪುರೋಹಿತರು ಇದ್ದಾರೆ, ಪೂಜೆ ಪುನಸ್ಕಾರಗಳು ತುಂಬಾ
ಚೆನ್ನಾಗಿ ನಡೆಯುತ್ತವೆ. ಹೊರಗಡೆಯಿಂದ ನೋಡಿದರೆ
ದೇವಸ್ಥಾನವು ತುಂಬಾ ಸುಂದರವಾಗಿದೆ, ಒಳಗಡೆಯೂ
ಸಹ ಅಷ್ಟೇ ಸುಂದರವಾಗಿದೆ ಈ ಸ್ಥಳದ ವಿಶೇಷ ಎಂದರೆ
ಊರಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಂ
ಸಮುದಾಯದವರು ವಾಸಿಸುತ್ತಿರುವುದು ಹಾಗೂ ಇತರ
ಎಲ್ಲ ಸಮುದಾಯದವರು ಇಲ್ಲಿ ಸಹಬಾಳ್ವೆಯಿಂದ
ಇದ್ದಾರೆ.
ಮೈ ಸೂರಿನ ಭಾಗದವರು ಇದನ್ನು ದೊಡ್ಡದ ಮರ ಎಂದು ಕರೆಯುತ್ತಾರೆ. ಇದು ಮೈ ಸೂರು ಟಿ ನರಸೀಪುರ
ರಸ್ತೆಯಲ್ಲಿದೆ ಮೈ ಸೂರಿನಿಂದ 8 ಕಿಲೋಮೀಟರ ್ ದೂರದಲ್ಲಿದೆ. ಇದು ಕರ್ನಾಟಕದ ಎರಡನೇ ದೊಡ್ಡ
ಆಲದ ಮರ ಆಗಿದೆ, ಇದು ನೋಡಲು ಛತ್ರಿಯ (ಅಂಬ್ರೆಲ್ಲಾ) ರೀತಿ ಇದೆ ನೋಡಲು ಬಹಳ
ಸುಂದರವಾಗಿದೆ ಆದ್ದರಿಂದ ಇದು ಒಂದು ಪ್ರವಾಸಿ ತಾಣ ವಾಗಿದೆ. ಈ ಮರದ ಕೆಳಗಡೆ ಮುನೇಶ್ವರ ದೇವರು
ಇದೆ ಇಂದಿಗೂ ಇಲ್ಲಿ ಸ್ಥಳೀಯ ಜನರು ಪೂಜೆ ಮಾಡುತ್ತಾರೆ, ಈ ಮರವು 1 ಎಕರೆ ನಾಲ್ಕು ಗುಂಟೆ ಹಬ್ಬಿದೆ ಈ
ಜಮೀನಿನ ಮಾಲೀಕರನ್ನು ವಿಚಾರಿಸಿದಾಗ ಇದು 300 ವರ್ಷ ಹಳೆಯದಾಗಿದೆ ಎಂದು ಮತ್ತು ಇದನ್ನು
ನಾಲ್ಕು ತಲೆಮಾರಿನ ಹಿಂದಿನವರು ನೆಟ್ಟಿರುತ್ತಾರೆ ಎಂದು ಈ ಜಮೀನನ್ನು ಮತ್ತು ಮರವನ್ನು
ನೋಡಿಕೊಳ್ಳುತ್ತಿರುವ ಮಾಲೀಕ ಮಹಾದೇವ ಅವರು ಹೇಳುತ್ತಾರೆ. ಮೈಸೂರಿನ ನಗರಾಡಳಿತ ದವರು ಇದನ್ನು
ಮೈಸೂರಿನ ಪಾರಂಪರಿಕ ಮರ ಎಂದು ಘೋಷಣೆ ಮಾಡಿದ್ದಾರೆ, ಈ ಮರದ ಕೆಳಗಡೆ ವಿದೇಶಿಯರು ಬಂದು
ಯೋಗ ಮತ್ತು ಹಲವು ಸಾಂಸ್ಕ ೃತಿಕ ಕಾರ್ಯಕ್ರಮಗಳು ನಡೆಸುತ್ತಿರುತ್ತಾರೆ ಸುತ್ತಮುತ್ತಲಿನ ಜನರು ಬಿಸಿಲಿನ
ಸಮಯದಲ್ಲಿ ವಿಶ್ರಾಂತಿಗೆ ಈ ಮರದ ಕೆಳಗಡೆ ಬಂದು ಕುಳಿತುಕೊಳ್ಳುತ್ತಾರೆ, ಸಿನಿಮಾಗಳು ಇಲ್ಲಿ ಚಿತ್ರತವಾಗಿವೆ
ಅವು ಕನ್ನಡ, ಹಿಂದಿ, ತಮಿಳು ಮತ್ತು ಇನ್ನು ಹಲವಾರು ಭಾಷೆಗಳಾಗಿದ್ದಾವೆ, ಅದರಲ್ಲಿ ಪ್ರಮುಖವಾಗಿ ರಾಜ
ಹಿಂದುಸ್ತಾನಿ ಅಮೀರ ್ ಖಾನ ್ ಅವರದು ತಮಿಳು ಚಿತ್ರ ಬಾಬಾ ರಜನಿಕಾಂತ ್ ಅವರದು ಸಂಗೊಳ್ಳಿ
ರಾಯಣ್ಣ, ಕೆಜಿಎಫ ್ ಹೀಗೆ ಹಲವಾರು ಸಿನಿಮಾಗಳು ಆಗಿದ್ದಾವೆ. ಈ ಜಾಗದಲ್ಲಿ ಆದ್ದರಿಂದ ಇದು ಬಹಳ
ವಿಶೇಷತೆಯನ್ನು ಪಡೆದಿದ್ದು ಪ್ರೇಕ್ಷಣೀಯ ಸ್ಥಳವಾಗಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ.
5. ಚಿಕ್ಕಳ್ಳಿಯ ಆಲದ ಮರ
ಚಿಕ್ಕಳ್ಳಿಯ ಆಲದ ಮರ
ಪ್ರಾಚೀನ ಕಾಲದಲ್ಲಿ ಮೈ ಸೂರಿನ ಭಾಗದಲ್ಲಿ ನರಬಲಿ ಪದ್ಧತಿಯು ಆಚರಣೆಯಲ್ಲಿ ಇತ್ತು, ಎಂಬ ಅಂಶವು ಈ
ಭಾಗದಲ್ಲಿ ಕೆಲವು ಪ್ರದೇಶಗಳ ಕಲ್ಲಿನ ಮೇಲಿನ ಚಿತ್ರಗಳು ನಮಗೆ ಆಲನಹಳ್ಳಿ ಮತ್ತು ನಾಡನಹಳ್ಳಿ ಮಧ್ಯ ಇರುವ
ಕೆರೆಯ ದಂಡೆಯ ಮೇಲೆ ಸಿಗುತ್ತವೆ. ಮೈ ಸೂರು ಟಿ. ನರಸೀಪುರ ರಸ್ತೆಯಲ್ಲಿರುವ ನಾಡನಹಳ್ಳಿ ಗ್ರಾಮದ ಬಳಿಯ
ಕೆರೆಯ ಪಕ್ಕ ನರಬಲಿಯ ಚಿತ್ರಗಳು ಇದ್ದಾವೆ. ಈ ಶಿಲೆಯಲ್ಲಿ ಇದ್ದಾವೆ ನಾನು ಈ ಗ್ರಾಮದ ಮುಖಂಡರು ನನ್ನ
ಸ್ನೇಹಿತನ ಮಾಲಿಂಗ ಸ್ವಾಮಿ ಮತ್ತು ಸತೀಶ ್ ಇವರು ಸಂಗತಿಗಳನ್ನು ಹೇಳಿದರು, ಕೆರೆ ಹತ್ತಿರ ಸಣ್ಣ ಸಣ್ಣದಾದ ಹಲವು
ದೇವಾಲಯಗಳು ಇದ್ದಾವೆ. ಅದರಲ್ಲಿ ಖ್ಯಾತರಾಯ ಎಂಬ ದೇವರ ವಿಗ್ರಹವಿದೆ ಅದರ ಪಕ್ಕದಲ್ಲಿ ಮನುಷ್ಯನನ್ನು
ಬಲಿಕೊಡುವ ಚಿತ್ರಗಳು ಕಲ್ಲಿನ ಮೇಲೆ ಇದೆ, ಇದರಿಂದ ನಮಗೆ ಗೊತ್ತಾಗುವುದೇನೆಂದರೆ, ಇಲ್ಲಿ ನರಬಲಿ ಪದ್ಧತಿಯ
ಆಚರಣೆ ಇತ್ತು ಎಂದು ತಿಳಿಯಬಹುದು. ಈಗಲೂ ಇಲ್ಲಿರುವ ದೇವರು ಖ್ಯಾತರಯನಿಗೆ ಕುರಿ ಬಲಿ ಕೊಡುವ ಪದ್ಧತಿ
ಇದೆ, ಹಿಂದೆ ಕೋಣಗಳನ್ನು, ಈಗ ಕುರಿಗಳನ್ನು ಬಲಿ ಕೊಡುವ ಪದ್ಧತಿ ಈಗಲೂ ಮುಂದುವರೆದಿದೆ ಪ್ರತಿ ವರ್ಷ
ಫೆಬ್ರವರಿ ತಿಂಗಳ ಎರಡನೇ ವಾರದಲ್ಲಿ ನಡೆಯುತ್ತದೆ, ಪಂಜಿನ ಮೆರವಣಿಗೆ ಮುಖಾಂತರ ರಾತ್ರಿ ಸಮಯದಲ್ಲಿ
ದೇವರಿಗೆ ಪೂಜೆ ಮಾಡಿ ಊರಿನೊಳಗಡೆ ಹೋಗುತ್ತಾರೆ. ಹಿಂದಿನ ಕಾಲದಲ್ಲಿ ಊರಿಗೆ ಒಳ್ಳೆಯದಾಗಲಿ, ಊರಿಗೆ
ದುಷ್ಟ ಶಕ್ತಿಗಳ ಕಣ್ಣು ಬೀಳದೆ ಇರಲಿ,ಊರಿಗೆ ರೋಗರುಜಿನೆಗಳು ಬರದ ಹಾಗೆ ಇರಲಿ, ಊರಿಗೆ ಜನರಿಗೆ
ಒಳ್ಳೆಯದಾಗಲಿ ಎಂದು ತಿಳಿಸುವ ಈ ಬಲಿಕೊಡುವ ಪದ್ಧತಿ ಇತ್ತು ಅಂತ ಹೇಳುತ್ತಾರೆ. ನರಬಲಿ ಯಾವ ಕಾಲದಲ್ಲಿ
ಇತ್ತು ಅಂತ ತಿಳಿಸುವ ಯಾವ ಆಧಾರವು ಇಲ್ಲ ಆದರೆ ಕಲ್ಲಿನ ಮೇಲೆ ಚಿತ್ರಗಳು ಇವೆ ಮತ್ತೆ ಸ್ಥಳೀಯ ಜನರು ಈ
ಪದ್ಧತಿ ಇತ್ತು ಅಂತ ಹೇಳುತ್ತಾರೆ.
6. ನರಬಲಿ
ನರಬಲಿ ಇರುವ ಕಲ್ಲಿನ ಮೇಲಿನ ಚಿತ್ರ
ನರಬಲಿ ಚಿತ್ರಗಳು ಇರುವ ಪ್ರದೇಶ
ಈ ಕೆರೆಯ ಪಕ್ಕ ಇರುವ ಇತರ ಶಿಲ್ಪಗಳು
ಉಪಸಂಹಾರ
ನನ್ನ ಈ ಅಧ್ಯಯನದಿಂದ ಒಟ್ಟಾರೆಯಾಗಿ ಇತಿಹಾಸದ ಹಲವು ವಿಷಯಗಳು ಇನ್ನು ಹೆಚ್ಚು ಬೆಳಕಿಗೆ
ಬರಬೇಕಾಗಿದೆ, ಅಂದರೆ ದೇವಾಲಯಗಳ ಮಹತ್ವ ಅದರ ಶೈಲಿ ಆ ಊರುಗಳು ಹಿಂದೆ ಇದ್ದ
ಪ್ರಾಮುಖ್ಯತೆ ಹಿಂದೆ ಮತ್ತು ಇವತ್ತು ಧಾರ್ಮಿಕ ಆರಾಧನೆಗಳು ನನಗೆ ತಿಳಿಯಿತು. ಇಲ್ಲಿನ ವಿಶೇಷ
ಆಚರಣೆಗಳು, ಈ ಸ್ಥಳಗಳು ಪ್ರಕೃತಿ ಮನೋಹರವಾಗಿದೆ, ಇದರಿಂದ ನನಗೆ ಸಂತೋಷವಾಯಿತು.
ಇನ್ನು ಹೆಚ್ಚಿನ ಸಂಶೋಧನೆಗೆ ಇದು ದಾರಿಯಾಯಿತು. ಆದ್ದರಿಂದ ಈ ಊರುಗಳ ಬಗ್ಗೆ
ದೇವಾಲಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನನ್ನ ಕೈಲಾದಷ್ಟು ಸಂಗ್ರಹಿಸಿದ್ದೇನೆ, ಇವುಗಳ
ವಿಶೇಷತೆ ಹೇಳಿದ್ದೇನೆ, ಇದರಿಂದ ಹಲವು ಹೊಸ ಸಂಶೋಧನೆಕಾರರಿಗೆ ಸಹಾಯ ಆಗಬಹುದು,
ಇನ್ನು ಹೆಚ್ಚಿನ ಸಂಶೋಧನೆಗಳು ಆಗಲಿ ಎಂದು ನಾನು ಬಯಸುತ್ತೇನೆ. ನಾನು ನನ್ನ ಎಂ ಎ
ಪದವಿ ಮಿತಿಯಲ್ಲಿ ಮಾಡಿದ್ದೇನೆ, ನಾನು ಸಂಶೋಧನೆ ರೀತಿಯಲ್ಲಿ ಮಾಡಿಲ್ಲ ಹೆಚ್ಚಿನ ಸಂಶೋಧನೆ
ಆಗಬೇಕು ಹೆಚ್ಚು ವಿಷಯಗಳು ಬೆಳಕಿಗೆ ಬರಬೇಕು.
ಆಕರ ಗ್ರಂಥಗಳು ಮತ್ತು ಮಾಹಿತಿಗಳು
1.ಎಪಿಗ್ರಾಫಿ ಕರ್ನಾಟಕ ಮೈ ಸೂರು ಜಿಲ್ಲೆ ನಾಲ್ಕನೇ ಸಂಪುಟ, ಲೇಖಕರು ಬಿ. ಎಲ ್. ರೈ ಸ ್ ಇದನ್ನು
ಮರು ಪ್ರಕಟಿಸಿದವರು ಕನ್ನಡ ಅಧ್ಯಯನ ಸಂಸ್ಥೆ ಮೈ ಸೂರು ವಿಶ್ವವಿದ್ಯಾಲಯ 1975.
2.ತಿರುಮಲ ಕೊಡಲು ನರಸೀಪುರ ತಾಲೂಕು ಗೆಜೆಟಿಯರ ್ (ಕರ್ನಾಟಕ ಸರ್ಕಾರ), ಲೇಖಕರು ಎಸ ್.
ರಾಜೇಂದ್ರಪ್ಪ.
3.ಕರ್ನಾಟಕ ಗ್ರಾಮ ಚರಿತ್ರೆ ಕೋಶ ಮೈ ಸೂರು ಜಿಲ್ಲೆ ,ಭಾಗ-1 ಲೇಖಕರು ಪ್ರೊಫೆಸರ ್. ಡಿ. ವಿ.
ನಾಯಕ ್ 2019
4.ಮೈ ಸೂರು ತಾಲೂಕು ಗೆಜಿಟಿಯರ ್(ಕರ್ನಾಟಕ ಸರ್ಕಾರ), ಲೇಖಕರು ಡಾಕ್ಟರ ್ ಎನ ್. ಎನ ್. ಚಿಕ್ಕ
ಮಾದು
5.ಮೈ ಸೂರು ನೂರಿ ನೂರು ವರ್ಷಗಳ ಹಿಂದೆ, ಪ್ರೊಫೆಸರ ್. ಪಿ.ವಿ. ನರಸಿಂಹರಾಜು
6. ಶ್ರೀ ಗರ್ಗೇಶ್ವರ ್ ಮಹಾತ್ಮೆ, ಲೇಖಕರು ಜಿ.ಎ. ಶಿವರಾಮಕೃಷ್ಣ
ನೇರ ಸಂದರ್ಶನ
1.ಚಾಮರಾಜನಗರದ ವಿಜಯ ಪಾರ್ಶ್ವನಾಥ ಬಸದಿಯ ಅರ್ಚಕರು ಪ್ರೇಮ ್ ಚಂದ್ರ
2.ಹನುಮಂತೇಶ್ವರ ದೇವಸ್ಥಾನದ ಅರ್ಚಕರು ನರಸೀಪುರದ ಮುಖಂಡರು ಮತ್ತು ಜನರು
3.ಚಿಕ್ಕಳ್ಳಿ ಆಲದ ಮರದ ಮಾಲೀಕರು ಮಹದೇವ ್ ವರುಣಾದ ದೇವಸ್ಥಾನದ ಅರ್ಚಕ ಸಂತೋಷ ಆರಾಧ್ಯ
ಮತ್ತು ಗ್ರಾಮದ ಮುಖಂಡರು
4.ವರದರಾಜ ದೇವಸ್ಥಾನದ ಅರ್ಚಕರು
5.ನಾಡನಹಳ್ಳಿಯ ಮಹಾಲಿಂಗ ಸ್ವಾಮಿ ಸತೀಶ ್ ಹಲವು ಹಿರಿಯರು
6.ಗರ್ಗೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರು ದೀಕ್ಷಿತ
ಧನ್ಯವಾದಗಳು

More Related Content

What's hot

AYURNIX SWARNAPRSHANAM PLUS
AYURNIX SWARNAPRSHANAM PLUSAYURNIX SWARNAPRSHANAM PLUS
AYURNIX SWARNAPRSHANAM PLUSDr Rahul Gupta
 
L'hinduisme
L'hinduismeL'hinduisme
L'hinduismejvalara
 
Administrative system under the rashtrakutas
Administrative system under the rashtrakutas Administrative system under the rashtrakutas
Administrative system under the rashtrakutas Virag Sontakke
 
สไลด์ ภูมิปัญญาไทย ป.5+489+dltvsocp5+55t2soc p05 f19-1page
สไลด์ ภูมิปัญญาไทย ป.5+489+dltvsocp5+55t2soc p05 f19-1pageสไลด์ ภูมิปัญญาไทย ป.5+489+dltvsocp5+55t2soc p05 f19-1page
สไลด์ ภูมิปัญญาไทย ป.5+489+dltvsocp5+55t2soc p05 f19-1pagePrachoom Rangkasikorn
 
Administration System Under Rashtrakuta Dynasty
Administration System Under Rashtrakuta DynastyAdministration System Under Rashtrakuta Dynasty
Administration System Under Rashtrakuta DynastyBanaras Hindu University
 
बदलौन (Exchange) एवं मुद्रा (Currency)
बदलौन (Exchange)  एवं मुद्रा (Currency)बदलौन (Exchange)  एवं मुद्रा (Currency)
बदलौन (Exchange) एवं मुद्रा (Currency)Virag Sontakke
 
शाक्त धर्म .pptx
शाक्त धर्म .pptxशाक्त धर्म .pptx
शाक्त धर्म .pptxVirag Sontakke
 
Vedic economy : वैदिक अर्थव्यवस्था
Vedic economy : वैदिक अर्थव्यवस्था Vedic economy : वैदिक अर्थव्यवस्था
Vedic economy : वैदिक अर्थव्यवस्था Prachi Sontakke
 
Later Vedic religion new.pdf
Later Vedic religion new.pdfLater Vedic religion new.pdf
Later Vedic religion new.pdfPrachiSontakke5
 
07 sakaladhikara by sage agastya
07 sakaladhikara by sage agastya07 sakaladhikara by sage agastya
07 sakaladhikara by sage agastyaAshok Nene
 
अवतारवाद
अवतारवाद  अवतारवाद
अवतारवाद Virag Sontakke
 
Laws of ancient Hindu marriage and Streedhan
Laws of ancient Hindu marriage and StreedhanLaws of ancient Hindu marriage and Streedhan
Laws of ancient Hindu marriage and StreedhanPrachiSontakke5
 

What's hot (20)

AYURNIX SWARNAPRSHANAM PLUS
AYURNIX SWARNAPRSHANAM PLUSAYURNIX SWARNAPRSHANAM PLUS
AYURNIX SWARNAPRSHANAM PLUS
 
Avatarvaada.pdf
Avatarvaada.pdfAvatarvaada.pdf
Avatarvaada.pdf
 
Life and teaching of Gautam Buddha
Life and teaching of Gautam BuddhaLife and teaching of Gautam Buddha
Life and teaching of Gautam Buddha
 
L'hinduisme
L'hinduismeL'hinduisme
L'hinduisme
 
legal institutions.pdf
legal institutions.pdflegal institutions.pdf
legal institutions.pdf
 
Avatarvad
AvatarvadAvatarvad
Avatarvad
 
Administrative system under the rashtrakutas
Administrative system under the rashtrakutas Administrative system under the rashtrakutas
Administrative system under the rashtrakutas
 
สไลด์ ภูมิปัญญาไทย ป.5+489+dltvsocp5+55t2soc p05 f19-1page
สไลด์ ภูมิปัญญาไทย ป.5+489+dltvsocp5+55t2soc p05 f19-1pageสไลด์ ภูมิปัญญาไทย ป.5+489+dltvsocp5+55t2soc p05 f19-1page
สไลด์ ภูมิปัญญาไทย ป.5+489+dltvsocp5+55t2soc p05 f19-1page
 
saur sampradaya.pdf
saur sampradaya.pdfsaur sampradaya.pdf
saur sampradaya.pdf
 
Administration System Under Rashtrakuta Dynasty
Administration System Under Rashtrakuta DynastyAdministration System Under Rashtrakuta Dynasty
Administration System Under Rashtrakuta Dynasty
 
बदलौन (Exchange) एवं मुद्रा (Currency)
बदलौन (Exchange)  एवं मुद्रा (Currency)बदलौन (Exchange)  एवं मुद्रा (Currency)
बदलौन (Exchange) एवं मुद्रा (Currency)
 
शाक्त धर्म .pptx
शाक्त धर्म .pptxशाक्त धर्म .pptx
शाक्त धर्म .pptx
 
Els invents
Els inventsEls invents
Els invents
 
Vedic economy : वैदिक अर्थव्यवस्था
Vedic economy : वैदिक अर्थव्यवस्था Vedic economy : वैदिक अर्थव्यवस्था
Vedic economy : वैदिक अर्थव्यवस्था
 
Later Vedic religion new.pdf
Later Vedic religion new.pdfLater Vedic religion new.pdf
Later Vedic religion new.pdf
 
Vaartaa.pdf
Vaartaa.pdfVaartaa.pdf
Vaartaa.pdf
 
07 sakaladhikara by sage agastya
07 sakaladhikara by sage agastya07 sakaladhikara by sage agastya
07 sakaladhikara by sage agastya
 
अवतारवाद
अवतारवाद  अवतारवाद
अवतारवाद
 
Ganpatya
GanpatyaGanpatya
Ganpatya
 
Laws of ancient Hindu marriage and Streedhan
Laws of ancient Hindu marriage and StreedhanLaws of ancient Hindu marriage and Streedhan
Laws of ancient Hindu marriage and Streedhan
 

Similar to padmakar project.pdf

kanrajostava 4.pptx
kanrajostava 4.pptxkanrajostava 4.pptx
kanrajostava 4.pptxRekhaSan
 
ಕರ್ನಾಟಕದ ೧೫ ಪ್ರವಾಸೀ ಸ್ಥಳಗಳು
ಕರ್ನಾಟಕದ ೧೫ ಪ್ರವಾಸೀ ಸ್ಥಳಗಳುಕರ್ನಾಟಕದ ೧೫ ಪ್ರವಾಸೀ ಸ್ಥಳಗಳು
ಕರ್ನಾಟಕದ ೧೫ ಪ್ರವಾಸೀ ಸ್ಥಳಗಳುAACHINMAYIR
 
Hoysala Incription s hassan district karantaka
Hoysala Incription s hassan district  karantakaHoysala Incription s hassan district  karantaka
Hoysala Incription s hassan district karantakaSunil Kumar
 
Karnatakada aitihasika sthalagalu, badami, hampi, halebeedu
Karnatakada aitihasika sthalagalu, badami, hampi, halebeeduKarnatakada aitihasika sthalagalu, badami, hampi, halebeedu
Karnatakada aitihasika sthalagalu, badami, hampi, halebeeduDarshanNP2
 
ಪ್ರಾಚೀನ ಪ್ರೌಢ ಹಂತದ ರಜಪೂತರ ಕಲೆ ಮತ್ತು ವಾಸ್ತುಶಿಲ್ಪ280721
ಪ್ರಾಚೀನ ಪ್ರೌಢ ಹಂತದ ರಜಪೂತರ ಕಲೆ ಮತ್ತು ವಾಸ್ತುಶಿಲ್ಪ280721ಪ್ರಾಚೀನ ಪ್ರೌಢ ಹಂತದ ರಜಪೂತರ ಕಲೆ ಮತ್ತು ವಾಸ್ತುಶಿಲ್ಪ280721
ಪ್ರಾಚೀನ ಪ್ರೌಢ ಹಂತದ ರಜಪೂತರ ಕಲೆ ಮತ್ತು ವಾಸ್ತುಶಿಲ್ಪ280721Srinivas Nagaraj
 
History of Basavanagudi
History of BasavanagudiHistory of Basavanagudi
History of BasavanagudiVijayGowda45
 

Similar to padmakar project.pdf (6)

kanrajostava 4.pptx
kanrajostava 4.pptxkanrajostava 4.pptx
kanrajostava 4.pptx
 
ಕರ್ನಾಟಕದ ೧೫ ಪ್ರವಾಸೀ ಸ್ಥಳಗಳು
ಕರ್ನಾಟಕದ ೧೫ ಪ್ರವಾಸೀ ಸ್ಥಳಗಳುಕರ್ನಾಟಕದ ೧೫ ಪ್ರವಾಸೀ ಸ್ಥಳಗಳು
ಕರ್ನಾಟಕದ ೧೫ ಪ್ರವಾಸೀ ಸ್ಥಳಗಳು
 
Hoysala Incription s hassan district karantaka
Hoysala Incription s hassan district  karantakaHoysala Incription s hassan district  karantaka
Hoysala Incription s hassan district karantaka
 
Karnatakada aitihasika sthalagalu, badami, hampi, halebeedu
Karnatakada aitihasika sthalagalu, badami, hampi, halebeeduKarnatakada aitihasika sthalagalu, badami, hampi, halebeedu
Karnatakada aitihasika sthalagalu, badami, hampi, halebeedu
 
ಪ್ರಾಚೀನ ಪ್ರೌಢ ಹಂತದ ರಜಪೂತರ ಕಲೆ ಮತ್ತು ವಾಸ್ತುಶಿಲ್ಪ280721
ಪ್ರಾಚೀನ ಪ್ರೌಢ ಹಂತದ ರಜಪೂತರ ಕಲೆ ಮತ್ತು ವಾಸ್ತುಶಿಲ್ಪ280721ಪ್ರಾಚೀನ ಪ್ರೌಢ ಹಂತದ ರಜಪೂತರ ಕಲೆ ಮತ್ತು ವಾಸ್ತುಶಿಲ್ಪ280721
ಪ್ರಾಚೀನ ಪ್ರೌಢ ಹಂತದ ರಜಪೂತರ ಕಲೆ ಮತ್ತು ವಾಸ್ತುಶಿಲ್ಪ280721
 
History of Basavanagudi
History of BasavanagudiHistory of Basavanagudi
History of Basavanagudi
 

padmakar project.pdf

  • 1.
  • 2.
  • 3.
  • 4.
  • 5. ಪರಿವಿಡಿ 1.ಚಾಮರಾಜನಗರದ ವಿಜಯ ಪಾರ್ಶ್ವನಾಥ ಬಸದಿ 2.ವರುಣ 3.ವರ ಕೊಡು ವರದರಾಜ ಸ್ವಾಮಿ ದೇವಸ್ಥಾನ 4.ಟಿ.ನರಸೀಪುರ ◦ ಅಗಸ್ಟೇಶ್ವರ ದೇವಸ್ಥಾನ ◦ ಗುಂಜಾಂ ನರಸಿಂಹ ಸ್ವಾಮಿ ದೇವಸ್ಥಾನ ◦ ಗರ್ಗೇಶ್ವರ ಸ್ವಾಮಿ ದೇವಸ್ಥಾನ 5.ಚಿಕ್ಕಳ್ಳಿಯ ಆಲದ ಮರ 6.ನರಬಲಿ ಪದ್ಧತಿ ಮೈ ಸೂರು ಪ್ರದೇಶದಲ್ಲಿ 1.ಚಾಮರಾಜನಗರದ ವಿಜಯ ಪಾರ್ಶ್ವನಾಥ ಬಸದಿ 2.ವರುಣ 3.ವರ ಕೊಡು ವರದರಾಜ ಸ್ವಾಮಿ ದೇವಸ್ಥಾನ 4.ಟಿ.ನರಸೀಪುರ ◦ ಅಗಸ್ಟೇಶ್ವರ ದೇವಸ್ಥಾನ ◦ ಗುಂಜಾಂ ನರಸಿಂಹ ಸ್ವಾಮಿ ದೇವಸ್ಥಾನ ◦ ಗರ್ಗೇಶ್ವರ ಸ್ವಾಮಿ ದೇವಸ್ಥಾನ 5.ಚಿಕ್ಕಳ್ಳಿಯ ಆಲದ ಮರ 6.ನರಬಲಿ ಪದ್ಧತಿ ಮೈ ಸೂರು ಪ್ರದೇಶದಲ್ಲಿ
  • 6. ಪೀಠಿಕೆ  ಮೈ ಸೂರು ಸಾಂಸ್ಕ ೃತಿಕ ಮತ್ತು ಐತಿಹಾಸಿಕ ಪಾರಂಪರಿಕ ಹಿನ್ನೆಲೆ ಹೊಂದಿರುವ ಜಿಲ್ಲೆಯಾಗಿದೆ. ಇಂದು ಪ್ರತ್ಯೇಕ ಜಿಲ್ಲೆಯಾಗಿರುವ ಚಾಮರಾಜನಗರವು ಹಿಂದೆ ಮೈ ಸೂರು ಜಿಲ್ಲೆಯ ಭಾಗವಾಗಿತ್ತು, ಈ ಎರಡು ಪ್ರದೇಶಗಳು ಇಂದು ಪ್ರತ್ಯೇಕ ಜಿಲ್ಲೆಯಾಗಿದೆ. ಸಾವಿರಾರು ವರ್ಷ ಇತಿಹಾಸವನ್ನು ಹೊಂದಿದ್ದು, ಹಲವು ಪುರಾತನ ಐತಿಹಾಸಿಕ ದೇವಾಲಯಗಳು ಸ್ಮಾರಕಗಳು, ಧಾರ್ಮಿಕ ಸ್ಥಳಗಳು, ಕಾವೇರಿ, ಕಪಿಲ ನದಿಗಳು ಸುಂದರವಾದ ಅರಣ್ಯಗಳು ಬೆಟ್ಟಗುಡ್ಡ ವನ್ಯಜೀವಿಗಳನ್ನು ಹೊಂದಿದ ಪ್ರಕೃತಿ ಸೌಂದರ್ಯವನ್ನು ಹೊಂದಿವೆ, ನಾನು ಆಯ್ಕೆ ಮಾಡಿಕೊಳಲು ಈ ವಿಷಯವನ್ನು ನಾನು ನನ್ನ ದ್ವಿತೀಯ ಪಿಯುಸಿ ಶಿಕ್ಷಣ ಮೈಸೂರು ತಾಲೂಕಿನ ವರುಣ ಗ್ರಾಮದಲ್ಲಿ ಓದುತ್ತಿದ್ದಾಗ ನನಗೆ ವರುಣ ಮತ್ತು ನರಸೀಪುರ ಇನ್ನು ಹಲವು ಐತಿಹಾಸಿಕ ಸ್ಮಾರಕ ನೋಡಿ ಈ ಸ್ಥಳಗಳ ಬಗ್ಗೆ ಹೆಚ್ಚಿನ ಒಲವು ಆಸಕ್ತಿ ಉಂಟಾಯಿತು. ಈ ಭಾಗದ ದೇವಾಲಯಗಳ ವಿಗ್ರಹಗಳನ್ನು ನೋಡಿದಾಗ ಹಿಂದೆ ಈ ಸ್ಥಳಗಳಿಗೆ ಧಾರ್ಮಿಕ, ರಾಜಕೀಯ ಹಿನ್ನೆಲೆಯು ತಿಳಿದು ಬರುತ್ತದೆ. ಇವುಗಳಲ್ಲಿ ಕೆಲವು ಕೆಲವು ವಿಶೇಷಗಳೆಂದರೆ ನರಬಲಿ ಇತ್ತು ಎಂಬುದು ವಿಗ್ರಹಗಳ ನೋಡಿದಾಗ ತಿಳಿಯಬಹುದಾಗಿದೆ. ಸುಂದರವಾದ ಮತ್ತು ಪುರಾತನವಾದ ಆಲದ ಮರ ನನ್ನನ್ನು ಆಕರ್ಷಿಸಿದ್ದಲ್ಲದೆ ನನಗೆ ಅದರ ಐತಿಹಾಸಿಕತೆಯ ಬಗ್ಗೆ ಕುತೂಹಲ ಉಂಟಾಯಿತು, ಆದ್ದರಿಂದ ನಾನು ಈ ಜಿಲ್ಲೆಯ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲು ಕಾರಣವಾಯಿತು. ನಾನು ಆಯ್ಕೆ ಮಾಡಿಕೊಂಡ ಸ್ಥಳಗಳಲ್ಲಿ ಚಾಮರಾಜನಗರ ಪೇಟೆಯಲ್ಲಿರುವ ವಿಜಯ ಪಾರ್ಶ್ವನಾಥ ಬಸದಿ ಪ್ರಮುಖವಾಗಿದ್ದು, ಹೊಯ್ಸಳ ಕಾಲದಲ್ಲಿ ನಿರ್ಮಾಣವಾಗುವುದಾಗಿದೆ, ಚಾಮರಾಜನಗರ ಮೊದಲ ದೇವಾಲಯವಾಗಿದೆ ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ವಿಷ್ಣುವರ್ಧನ ರಾಜ ಚೋಳರ ಮೇಲೆ ಗೆದ್ದ ಸಂಕೇತವಾಗಿ ಕಟ್ಟಿಸಿದ ದೇವಾಲಯವಾಗಿದೆ. ನರಸೀಪುರ ಈ ಕ್ಷೇತ್ರ ತ್ರಿವೇಣಿ ಸಂಗಮವಾಗಿದೆ ಈ ಕ್ಷೇತ್ರ ಕಾಶಿ ಗಿಂತ ಒಂದು ಗುಲಗಂಜಿ ಹೆಚ್ಚು ಪುಣ್ಯಕ್ಷೇತ್ರವಾಗಿದೆ ಎನ್ನುತ್ತಾರೆ.
  • 7. ವರುಣ ಊರು ಹಿಂದೆ ಚಾಲುಕ್ಯ ಸಾಮಂತರು ಮತ್ತು ಗಂಗರು, ಹೊಯ್ಸಳರು, ಮೈ ಸೂರಿನ ಒಡೆಯರು ಆಳಿದ ಪ್ರದೇಶವಾಗಿದೆ. ಅವರ ಧಾರ್ಮಿಕ ಸ್ಮಾರಕಗಳು ಮತ್ತು ಇತರ ದೇವಾಲಯಗಳು ಈ ಊರಿನಲ್ಲಿ ಇಂದಿಗೂ ಕಂಡುಬರುತ್ತವೆ, ಮತ್ತೊಂದು ಪ್ರಮುಖ ಊರು ವರಕೊಡು ಸುಂದರವಾದ ಹೊಯ್ಸಳ ಕಾಲದ ವರದರಾಜ ಸ್ವಾಮಿ ದೇವಾಲಯ ಇದೆ ಮತ್ತು ಸುಂದರವಾದ ಕಲ್ಯಾಣಿ ಇದೆ, ನನ್ನ ಆಸಕ್ತಿಯನ್ನು ಕೆರಳಿಸಿದ ಅಂಶ ನರಬಲಿ ಇದಕ್ಕೆ ಸಂಬಂಧಿಸಿದಂತೆ ಮೈಸೂರು ಹತ್ತಿರ ಟಿ.ನರಸೀಪುರ ರಸ್ತೆಯ ಕೆರೆಯ ದಂಡೆ ಮೇಲಿರುವ ಕಲ್ಲಿನ ಮೇಲೆ ನರಬಲಿ ಕೊಡುವ ಚಿತ್ರಗಳು ಕಂಡು ಬರುತ್ತದೆ, ಇದೇ ರೀತಿಯಾದ ಮತ್ತೊಂದು ಕುತೂಹಲಕರಿಯಾದ ಸ್ಥಳ ಚಿಕ್ಕಳ್ಳಿ ಆಲದ ಮರ ಇದನ್ನು ಸ್ಥಳೀಯ ಜನರು ದೊಡ್ಡ ಆಲದ ಮರ ಎನ್ನುತ್ತಾರೆ. ಅದರ ಮಹತ್ವ ಎಲ್ಲರಿಗೂ ತಿಳಿಸಲು ನಾನು ನೂರಾರು ವರ್ಷಗಳ ಇತಿಹಾಸ ಇರುವ ಈ ಪಾರಂಪರಿಕ ಆಲದ ಮರವನ್ನು ತೆಗೆದುಕೊಳ್ಳಲು ಕಾರಣವಾಯಿತು ನಾನು ಈ ಸಂಶೋಧನೆ ಮಾಡಲು ಈ ಎಲ್ಲ ಪ್ರದೇಶಗಳಿಗೆ ನಾನೇ ಸ್ವತಃ ಹಲವಾರು ಬಾರಿ ಭೇಟಿಕೊಟ್ಟು ಹೆಚ್ಚಿನ ಮಾಹಿತಿಯನ್ನು ತೆಗೆದುಕೊಂಡಿರುತ್ತೇನೆ. ನನ್ನ ಈ ವಿಷಯಕ್ಕೆ ಸಂಬಂಧಿಸಿದಂತೆ ನನಗೆ ಅಗತ್ಯವಾದ ಮಾಹಿತಿಯನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿದ್ದೇನೆ, ಅವುಗಳಲ್ಲಿ ಆ ದೇವಾಲಯದ ಅರ್ಚಕರಿಂದ, ಊರಿನ ಹಿರಿಯರಿಂದ, ಅಲ್ಲಿನ ನನ್ನ ಸ್ಥಳೀಯ ಸ್ನೇಹಿತರಿಂದ ಮಾಹಿತಿಯನ್ನು ತೆಗೆದುಕೊಂಡಿದ್ದೇನೆ. ಇದಲ್ಲದೆ ಇದಕ್ಕೆ ಪೂರಕವಾದಂತಹ ಮಾಹಿತಿಯನ್ನು ದ್ವಿತೀಯ ಆಧಾರಗಳಾದ ಗೆಜಿಟಿಯರ ್ ಗ್ರಂಥಗಳಿಂದ ಮಾಹಿತಿಯನ್ನು ತೆಗೆದುಕೊಂಡು ಈ ಸ್ಥಳಗಳ ಐತಿಹಾಸಿಕ ಪಾರಂಪರಿಕ ಮಾಹಿತಿಯನ್ನು ಕೂಡಿ ಕರಿಸುವುದಕ್ಕೆ ಪ್ರಯತ್ನ ಮಾಡಿದ್ದೇನೆ.
  • 8. 1.ಚಾಮರಾಜನಗರದ ವಿಜಯ ಪಾರ್ಶ್ವನಾಥ ಬಸದಿ ವಿಜಯ ಪಾರ್ಶ್ವನಾಥ ಬಸದಿ ಚಾಮರಾಜನಗರದ ಜೈನ ತೀರ್ಥಂಕರ ಬಸದಿ ಆಗಿದೆ 29 ಮೇ ಕ್ರಿಸ್ತಶಕ 1116 ಸೋಮವಾರ ಇದನ್ನು ಕಟ್ಟಿಸಲಾಗಿದೆ. ಹೊಯ್ಸಳ ರಾಜ ವಿಷ್ಣುವರ್ಧನ ಮಂತ್ರಿ ಸಂಧಿ ವಿಗ್ರಹವು ಪುಣಿ ಸಮಯ ಇದನ್ನು ಕಟ್ಟಿಸಿದರು, ಚಾಮರಾಜನಗರದ ಹಳೆಯ ಹೆಸರು ಅರಿಕುಟೀರ ಎಂಬುದಾಗಿತ್ತು. ಮುಮ್ಮಡಿ ಕೃಷ್ಣರಾಜ ಒಡೆಯರ ತಂದೆ ಚಾಮರಾಜ ಒಡೆಯರು ಹುಟ್ಟಿದ್ದು ಈ ಊರಿನಲ್ಲಿ ಇವರ ಸ್ಮರಣಾರ್ಥ 1825 ರಲ್ಲಿ ಹೆಸರು ಬದಲಾವಣೆ ಮಾಡಿದರು, ವಿಜಯ ಪಾರ್ಶ್ವನಾಥ ಬಸದಿ ಕಟ್ಟಲು ಕಾರಣವೆಂದರೆ, ಚೋಳರ ಮೇಲೆ 1114 ರಲ್ಲಿ ಹೊಯ್ಸಳರ ವಿಷ್ಣುವರ್ಧನ ಪಡೆದ ಗೆಲುವನ್ನು ಸ್ಮರಣೀಯವಾಗಿರುವುದು ಇದರ ಸ್ಮರಣಾರ್ಥ ಇವನ ಮಂತ್ರಿ ಪುಣಿ ಸಮಯ ವಿಜಯದ ನೆನಪಿಗಾಗಿ ಗಂಗವಾಡಿ 96,000 ದಿಂದ ಚೋಳರನ್ನು ಓಡಿಸಿದ್ದಕ್ಕಾಗಿ ಬಸದಿಯನ್ನು ಕಟ್ಟಿಸಿದನು.
  • 10. ಮಾನಸ್ತಂಭ ಮಾನಸ್ತಂಭ ಬಸದಿಯ ಮುಂಭಾಗ ಸುಂದರವಾದ ಮಾನಸ್ತಂಬ ಇದೆ ಮತ್ತು ಬಸದಿಯ ಮುಂಭಾಗ ಸುಂದರವಾದ ಮಂಟಪವು ಇದೆ. ಇದು ಮಂಟಪದಿಂದ ಹಬ್ಬ ಉತ್ಸವಗಳಲ್ಲಿ ಮೆರವಣಿಗೆ ಮಾಡುವ ಸಂದರ್ಭದಲ್ಲಿ ಈ ಮಂಟಪದಿಂದ ಶುರುವಾಗುತ್ತಿತ್ತು. ಬಸದಿಯ ಬಾಗಿಲು ಸುಂದರವಾಗಿದೆ ಜೈನ ತೀರ್ಥಂಕರರ ಕೆತ್ತನೆ ಇದೆ, ವಿಜಯ ಪಾಶ್ವನಾಥ ಜೈನ ತೀರ್ಥಂಕರರ ಕೆತ್ತನೆ ಇದೆ.
  • 11. ಉತ್ಸವ ಮಂಟಪ ಸುಂದರವಾದ ಮಂಟಪವು ಇದೆ.ಇದು ಈ ಮಂಟಪದಿಂದ ಹಬ್ಬ ಉತ್ಸವಗಳಲ್ಲಿ ಮೆರವಣಿಗೆ ಮಾಡುವಾಗ ಈ ಮಂಟಪದಿಂದ ಶುರುವಾಗುತ್ತಿತ್ತು . ಸುಂದರವಾದ ಮಂಟಪವು ಇದೆ.ಇದು ಈ ಮಂಟಪದಿಂದ ಹಬ್ಬ ಉತ್ಸವಗಳಲ್ಲಿ ಮೆರವಣಿಗೆ ಮಾಡುವಾಗ ಈ ಮಂಟಪದಿಂದ ಶುರುವಾಗುತ್ತಿತ್ತು .
  • 12. ದೇವಾಲಯದ ಪ್ರವೇಶ ದ್ವಾರ (ಬಾಗಿಲು) ದೇವಾಲಯದ ಪ್ರವೇಶ ದ್ವಾರ (ಬಾಗಿಲು)
  • 13. ವಿಜಯ ಪಾರ್ಶ್ವನಾಥ   ಬಸದಿ ಒಳಭಾಗ ವಿಜಯ ಪಾರ್ಶ್ವನಾಥ   ಬಸದಿ ಒಳಭಾಗ
  • 14. ವಿಜಯ ಪಾರ್ಶ್ವನಾಥ ವಿಜಯ ಪಾರ್ಶ್ವನಾಥ ವಿಜಯ ಪಾರ್ಶ್ವನಾಥ ಇಲ್ಲಿನ ಗರ್ಭಗುಡಿಯಲ್ಲಿರುವ ವಿಗ್ರಹವು ಅಪರೂಪದಾಗಿದೆ, ವಿಜಯ ನೆನಪಿಗೋಸ್ಕರ ಕಟ್ಟಿದಂತಹ ತೀರ್ಥಂಕರ ಆಗಿದೆ. ಇದು ಕರ್ನಾಟಕದಲ್ಲಿಯ ಅಪರೂಪದ ಮತ್ತು ವಿಶೇಷ ವಿಗ್ರಹವಾಗಿದೆ, ಈ ತೀರ್ಥಂಕರ ಹತ್ತಿರ ನಾವು ಏನು ಕೇಳಿಕೊಂಡರು, ಅದು ವಿಜಯ ಆಗುತ್ತದೆ ಎಂಬ ನಂಬಿಕೆಯಿದೆ.
  • 15. ಪದ್ಮಾವತಿ ಅಮ್ಮನವರು ಪದ್ಮಾವತಿ ಅಮ್ಮನವರು ಪಾಶ್ವನಾಥನ ಯಕ್ಷಿಣಿ ಯಾಗಿದ್ದಾರೆ ಈ ಪದ್ಮಾವತಿಯ ದೇವರ ಮಹಿಮೆ ಅಂದರೆ ಈ ದೇವರು ಕರ್ನಾಟಕದಲ್ಲಿ ಜೈನರಿಗೆ ಪ್ರಖ್ಯಾತಿ ಪಡೆದ ಹೊಂಬುಜ ಪದ್ಮಾವತಿ ತರಹ ಇದು ಶಕ್ತಿ ದೇವತೆಯಾಗಿದೆ. ಈ ದೇವತೆಯು ಕಷ್ಟವನ್ನು ನಿವಾರಿಸುವ ದೇವಿಯಾಗಿದ್ದಾಳೆ, ಈ ದೇವರಿಗೆ ತಮಗೆ ತೊಂದರೆ ಆದಾಗ ಹರಕೆಯನ್ನು ಕಟ್ಟಿಕೊಂಡರೆ ಅವರಿಗೆ ಕಷ್ಟಗಳು ಪರಿಹಾರವಾಗುತ್ತದೆ. ಶ್ರಾವಣ ಮಾಸ ಮತ್ತು ವಿಶೇಷ ಸಂದರ್ಭಗಳಲ್ಲಿ ವಿಶೇಷ ಪೂಜೆಯ ಈ ಪದ್ಮಾವತಿ ಅಮ್ಮನವರಿಗೆ ಆಗುತ್ತವೆ, ಬಳೆ ಪೂಜೆ ಎಲೆ ಪೂಜೆ ಹೀಗೆ ಹಲವು ರೀತಿಯಲ್ಲಿ ಪೂಜೆಗಳು ಆಗುತ್ತವೆ.
  • 16. ಈ ಶಾಸನವು 1116 ಶಾಸನ ಆಗಿದೆ ಈ ಶಾಸನವು ಕ್ರಿಸ್ತಶಕ 1116 ಶಾಸನ ಆಗಿದೆ. ವಿಜಯ ಪಾರ್ಶ್ವನಾಥ ಬಸದಿಯಲ್ಲಿ ಶಾಸನವೊಂದು ದೊರೆತಿದೆ. ಈ ಶಾಸನ ಹೊಯ್ಸಳರ ಮಂತ್ರಿ ಪುಣಿ ಸಮಯ ವಂಶದವರ ಬಗ್ಗೆ ಮತ್ತು ಅವರ ಗುರು ಅಜಿತ ಮುನಿಪನ ಬಗ್ಗೆ ಮಾಹಿತಿ ಹೊಂದಿದೆ. ಇದಕ್ಕೆ ಎಣ್ಣೆ ನಾಡು ಕರೆಯುತ್ತಿದ್ದರು, ಹೊಯ್ಸಳರು ಚೋಳರನ್ನು ಸೋಲಿಸಿದ್ದು ಜೈನ ಬಸದಿಗಳನ್ನು ಜೀರ್ಣೋದ್ಧಾರ ಮಾಡಿ ಹೊಸ ಬಸದಿಗಳನ್ನು ಕಟ್ಟಿದ್ದ ಹಲವು ರೀತಿಯ ಮಾಹಿತಿಯನ್ನು ಹೊಂದಿ. ಈ ಶಾಸನದಲ್ಲಿ ಊರಿಗೆ ಅರೆಕುಟೀರ ಎಂದು ಉಲ್ಲೇಖವಾಗಿದೆ, ಇದು ಚಾಮರಾಜನಗರದ ಹಳೆಯ ಅರೆಕುಟೀರ ಎಂದು ಇದರಿಂದ ನಮಗೆ ಗೊತ್ತಾಗುತ್ತದೆ.
  • 17. ಪಾರ್ಶ್ವನಾಥನ ಸುಂದರ ವಿಗ್ರಹ ಕ್ಷೇತ್ರ ಪಾಲ ಬ್ರಹ್ಮದೇವರ ವಿಗ್ರಹ
  • 18. ಜ್ವಾಲಾ ಮಾಲಿನಿ ದೇವಿ ನಿಷದಿ ಕಲ್ಲು
  • 19. ಲಕ್ಕಿ ಮರ ಇದು ಪದ್ಮಾವತಿದೇವರ ಮರ ಆಗಿದೆ ಕುಶ್ಮಾಂಡನಿ ದೇವಿ
  • 20. ಶಾಸನ - 1281 AD ಶಾಸನ ಕ್ರಿಸ್ತಶಕ 1281 ಇದೇ ಬಸದಿಯ ಪ್ರಕಾರದ ಪಶ್ಚಿಮದ ದಿಕ್ಕಿನಲ್ಲಿ ಸುಮಾರು 25 ಡಿಸೆಂಬರ ್ 1281 ಒಂದು ಹಾಕಿಸಿದ ಹೊಯ್ಸಳ ರಾಜ ಮೂರನೇ ವೀರ ನರಸಿಂಹ ಹಾಕಿಸಿದ ಶಾಸನ ಕಂಡುಬರುವುದು, ಇದರಲ್ಲಿ ಬಸದಿಯ ನಿರ್ವಹಣೆಗೆ ದಾನ ಕೊಟ್ಟಿರುವ ಮಾಹಿತಿ ಇದ್ದು ಇದರ ಮೂಲಕ ಊರಿನ ಗೌಡ ಗಳಿಗೆ ಆದೇಶ ಮಾಡಿದ ಅಂಶವನ್ನು ಈ ಶಾಸನ ಒಳಗೊಂಡಿದೆ.
  • 21. ವರುಣ ಗ್ರಾಮವು ಸಹ ಐತಿಹಾಸಿಕ ಗ್ರಾಮ ಆಗಿದ್ದು, ಈ ಪ್ರದೇಶವನ್ನು ಹಲವು ಸಾಮಂತರು ಆಳಿದ್ದಾರೆ. ಇದು ಬಹಳ ಹಿಂದಿನಿಂದಲೂ ಪ್ರಖ್ಯಾತಿ ಪಡೆದ ಊರು ಆಗಿದ್ದು ಇಲ್ಲಿ ಹಲವು ದೇವಾಲಯಗಳು ಬಸದಿಗಳು ಇಲ್ಲಿದ್ದವು. ಆದರೆ ಈಗ ಕೆಲವು ಮಾತ್ರ ಉಳಿದಿವೆ ಮತ್ತು ಈ ಸ್ಥಳವನ್ನು ಚಾಲುಕ್ಯ ವಂಶದ ಶಾಖೆಯ ಸಾಮಂತ ರಾಜರುಗಳು ಆಳುತ್ತಿದ್ದರು. ಅದರಲ್ಲಿ ಪ್ರಮುಖರು ದುರ್ಗ, ಗೊಗ್ಗಿ ,ನರಸಿಂಹ ಪ್ರಮುಖರು ಇವರಲ್ಲಿ ನರಸಿಂಹ ಬಹುಶಃ ಪಂಪನ ಆಶ್ರಯದಾತನಾಗಿದ್ದ ಅರಿಕೇಸರಿ ಯ ತಂದೆ ಇರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. 1919ರ ಅರ್ಕಲಾಜಿಕಲ ್ ಇಲಾಖೆಯ ವಿದ್ವಾಂಸರು ಮಾಹಿತಿಯು ತಿಳಿಸುವುದು ದುರ್ಗ ಆಡಳಿತಗಾರ ಎಂಬುವನು ಕ್ರಿಸ್ತಶಕ 900 ರಲ್ಲಿ ಇಲ್ಲಿದ್ದಿರಬಹುದು ಅದರ ಪೂರಕವಾಗಿ ಅವನ ಕಾಲದ 7 ವೀರಗಲ್ಲುಗಳು ದೊರೆತಿವೆ, ಇನ್ನೊಬ್ಬ ಸಾಮಂತ ಗೊಗ್ಗಿಯ ಮಗಳು ದೇವಗಿರಿ ಯಾದವರ ಬಿಲ್ಲಮ ನನ್ನು ವಿವಾಹವಾಗಿದ್ದಳು ಎಂಬುದು ಶಾಸನಗಳಿಂದ ತಿಳಿದುಬರುವುದು. ನಿರಂತರ ಹೋರಾಟಗಳು ಸಾಕ್ಷಿಯಾಗಿತ್ತು. ಏಕೆಂದರೆ ಗೌಡನು ಪಾಳೇಗಾರನಾಗಬೇಕು ಆಮೇಲೆ ರಾಜನಾಗಬೇಕು ಎಂಬುದು ಪ್ರತಿಯೊಬ್ಬರ ಆಸೆಯಾಗಿತ್ತು. 2. ವರುಣ
  • 22. ವರುಣ ಗ್ರಾಮದ ವಿಶೇಷತೆ ಇವರಿನಲ್ಲಿ ಹಲವು ದೇವಾಲಯಗಳು ಇದ್ದವು, ಅವುಗಳಲ್ಲಿ ಕೆಲವು ಅಮೂಲ್ಯವಾದ ವಿಗ್ರಹಗಳನ್ನು ಕಳ್ಳ ಕಾಕರು ಕದ್ದುಯ್ದಿದ್ದಾರೆ, ಮತ್ತು ಕೆಲವು ಉಳಿದ ಅಲ್ಪಸ್ವಲ್ಪ ದೇವರ ವಿಗ್ರಹಗಳಲ್ಲಿ ಈಗಿನ ವರುಣಾದ ದೇವೀರಮ್ಮನ ಮಂದಿರದ ಹತ್ತಿರ ಇವೆ, ಶಾಸನವೊಂದರಲ್ಲಿ ಊರಿಗೆ ಹೋನರ ಎಂಬ ಉಲ್ಲೇಖವಿದೆ, ಗೆಜಿಟಿಯರಿನಲ್ಲಿ ಉಲ್ಲೇಖಿಸಿದಂತೆ ಎಂಬ ಹೆಸರು ಇತ್ತು.
  • 26. ಮಹಾಲಿಂಗೇಶ್ವರ ದೇವಾಲಯ ಈ ಸ್ಥಳದಲ್ಲಿರುವ ಮಹಾಲಿಂಗೇಶ್ವರ ಗುಡಿ ಪ್ರಾಚೀನ ಗುಡಿಯಾಗಿದೆ ಮೊದಲನೇದಾಗಿದೆ 10ನೇ ಶತಮಾನದ ಕಾಲಕ್ಕೆ ಸೇರಿದ್ದಾಗಿದೆ ಚಿಕ್ಕದಾಗಿದ್ದರು ಸುಂದರವಾಗಿದೆ. 14 ಅಂಗಳದಷ್ಟು ಅಗಲವಿರುವ ಶಿವಮೂರ್ತಿಗಳು ಮುಖಮಂಟಪ ಸುತ್ತ ಪ್ರದಕ್ಷಿಣೆ ರೂಪದಲ್ಲಿ ಇದೆ ಆಮೇಲೆ ದೇವಸ್ಥಾನದ ಗೋಡೆಗಳ ಮೇಲೆ ಚಿತ್ರಗಳಿವೆ, ರಾಮಾಯಣದಲ್ಲಿ ಬರುವ ಕಾಮಧೇನು ನಂದಿನಿ ಗೋವಿನ ಅಪಹರಣ ಕಥಾಪ್ರಸಂಗವನ್ನು ಇವುಗಳನ್ನು ಮೂಲಕ ನಿರೂಪಿಸಲಾಗಿದೆ.
  • 29. ಮಹಾಲಿಂಗೇಶ್ವರದ ದೇವಾಲಯ ಮುಂಭಾಗದಲ್ಲಿ ಹಲವು ವಿಗ್ರಹಗಳಿವೆ, ಅದರಲ್ಲಿ ವೀರಗಲ್ಲುಗಳು ಮತ್ತು ರಾಜರಾಣಿ ಕುದುರೆ ಮೇಲೆ ಬರುವ ಚಿತ್ರ, ಮಹಿಳೆ ದೇವರಿಗೆ ನಮಸ್ಕರಿಸಿರುವ ಚಿತ್ರ, ಯೋಧರ ಕೈಯಲ್ಲಿ ಆಯುಧವನ್ನು ಹಿಡಿದಿರುವ ಚಿತ್ರಗಳು ಪ್ರಮುಖವಾಗಿವೆ.
  • 30. ದೇವಿರಮ್ಮ ದೇವಾಲಯ ದೇವಿರಮ್ಮ ದೇವಾಲಯ ಇಲ್ಲಿನ ಮತ್ತೊಂದು ಐತಿಹಾಸಿಕ ಮತ್ತು ಧಾರ್ಮಿಕ ಕಟ್ಟಡ ದೇವಿರಮ್ಮ ದೇವಾಲಯ ಇದು ವರುಣ ಗ್ರಾಮದ ಗ್ರಾಮ ದೇವತೆಯಾಗಿದ್ದು ಇದನ್ನು ಮುಮ್ಮಡಿ ಕೃಷ್ಣರಾಜ ಒಡೆಯರ ಪತ್ನಿ ದೇವ ಮಣ್ಣಿ ಕಟ್ಟಿಸಿದರು. ಇದು ಸಹ ಪುರಾತನ ದೇವಾಲಯ ಆಗಿದ್ದು ಗ್ರಾಮದ ಜನರು ಮತ್ತು ಅರ್ಚಕರು ಹೇಳುವ ಪ್ರಕಾರ ರೋಗ ರುಜುನೆಗಳು ತೊಂದರೆಯಾಗದಂತೆ ದೇವಿಯು ನೋಡಿಕೊಳ್ಳುತ್ತಿದ್ದಾಳೆ ಮತ್ತು ಊರನ್ನು ಕಾಪಾಡುತ್ತಾಳೆ ಎಂಬ ಪ್ರತಿತಿ ಇದೆ. ಇಲ್ಲಿನ ವಿಶೇಷತೆಂದರೆ ಈ ದೇವಿಯ ದೇವಾಲಯದ ಬಾಗಿಲನ್ನು 7 ವರ್ಷಕ್ಕೊಮ್ಮೆ ತೆಗೆಯುತ್ತಾರೆ ಸಂಕ್ರಾಂತಿ ಆದಮೇಲೆ ಬಾಗಿಲು ತೆಗೆದರೆ ಒಂದು ತಿಂಗಳ ಶಿವರಾತ್ರಿವರೆಗೆ ದೇವಸ್ಥಾನದ ಬಾಗಿಲು ತೆರೆದಿರುತ್ತದೆ ,ಒಳಗಡೆ ಹಚ್ಚಿದ ದೀಪವು ಏಳು ವರ್ಷದವರೆಗೆ ಉರಿಯುತ್ತಿರುತ್ತದೆ ಮುಂದಿನ ಬಾರಿ ಬಾಗಿಲು ತೆಗೆಯುವವರೆಗೆ ಅಲ್ಲಿ ದೇವಿಗೆ ಅರ್ಪಿಸಿದ ಹೂವು ಬಾಡಿರುವುದಿಲ್ಲ.
  • 31. ಮಹಾದೇಶ್ವರ ದೇವಸ್ಥಾನ ಮಹದೇಶ್ವರ ದೇವಾಲಯ ಇಲ್ಲಿನ ಮತ್ತೊಂದು ಐತಿಹಾಸಿಕ ಸ್ಥಳ ಮಹದೇಶ್ವರ ದೇವಾಲಯ ಇದನ್ನು ಕಟ್ಟಿಸಿದವರು, ಮುಮ್ಮಡಿ ಕೃಷ್ಣರಾಜ ಒಡೆಯರು ಇವರು ಕಾಶಿಯಿಂದ ಮೂರು ಈಶ್ವರ ಲಿಂಗವನ್ನು ತರಸಿ ಅದರಲ್ಲಿ ಒಂದನ್ನು ನಂಜನಗೂಡಿನಲ್ಲಿ ಪ್ರತಿಷ್ಠಾಪಿಸಿದರು, ಇನ್ನೊಂದನ್ನು ಮೂಡಗ ತೊರೆ, ಮತ್ತೊಂದನ್ನು ವರುಣದಲ್ಲಿ ಪ್ರತಿಷ್ಠಾಪಿಸಿದರು. ನಂಜನಗೂಡು ,ಮುಡಗ ತೊರೆ ವಿಶ್ವವಿಖ್ಯಾತಿ ಪಡೆದಿದ್ದು ವರುಣ ಈಶ್ವರ ಅಷ್ಟೊಂದು ಪ್ರಖ್ಯಾತಿಯನ್ನು ಪಡೆಯಲಿಲ್ಲ. ಈ ಲಿಂಗದ ವಿಶೇಷವೆಂದರೆ ಇದು ಚಿಕ್ಕದಾಗಿದೆ, ನಂಜನಗೂಡು ದೇವಸ್ಥಾನ ತರಹ ಇದೆ ಕಾಲಕಾಲಕ್ಕೆ ತಕ್ಕಂತೆ ಇದು ಮಳೆಗಾಲ, ಚಳಿಗಾಲ, ಬೇಸಿಗೆಯ ಕಾಲದಲ್ಲಿ ಲಿಂಗದ ಬಣ್ಣ ಬದಲಾವಣೆ ಆಗುತ್ತದೆ. ಮಾದೇಶ್ವರ ದೇವಾಲಯದ ಗೋಡೆಯ ಮೇಲೆ ಕೃಷ್ಣರಾಜ ಒಡೆಯರ ಶಾಸನವಿದ್ದು, ಈ ದೇವಾಲಯ ನಿರ್ಮಾಣದ ಹಿನ್ನೆಲೆಯ ಮಾಹಿತಿ ಹೊಂದಿದೆ ದೇವಸ್ಥಾನ ತುಂಬಾ ಸುಂದರವಾಗಿದೆ.
  • 32. ದೇವಾಂಬುದ್ಧಿ ಕೆರೆ ದೇವಬುದ್ಧಿ ಕೆರೆ ವರುಣಾದ ಮತ್ತೊಂದು ಆಕರ್ಷಣೆ ಎಂದರೆ, ಇಲ್ಲಿನ ದೇವಂ ಬುದ್ಧಿ ಕೆರೆ ಈ ಕೆರೆ ಇದನ್ನು ಜೀರ್ಣೋದ್ಧಾರ ಕ್ರಿಸ್ತಶಕ 1827ರಲ್ಲಿ ರಾಣಿ ದೇವಾಜಮಣಿ ಮಾಡಿಸಿರುತ್ತಾರೆ. ಈ ಕೆರೆ ನೋಡಲು ತುಂಬಾ ಸುಂದರವಾಗಿದೆ ದೊಡ್ಡದಾಗಿದೆ, ಈ ಕೆರೆ ಹತ್ತಿರ ಒಂದು ಮಂಟಪ ಸಹ ಇದೆ, ಇದರಿಂದ ಸುತ್ತಮುತ್ತಲಿನ ಹಲವು ಹಳ್ಳಿಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲಾಗಿದೆ, ಊರು ಬೆಳೆಯಲು ಮೂಲ ಕಾರಣವಾಗಿರಬಹುದು.
  • 34. ಈ ಸ್ಥಳದಲ್ಲಿ ಬೌದ್ಧಮತಿಯವಾದ ಮದ ಗಜೇಂದ್ರ ಎಂಬುವವನು ಗಂಗರ ಆಸ್ಥಾನಕ್ಕೆ ಬಂದು ತನ್ನ ಪಾಂಡಿತ್ಯದ ಹಮ್ಮ ನಿಂದ ಇಲ್ಲಿ ಸ್ಥಳೀಯ ಆಸ್ಥಾನದ ಪಂಡಿತರಿಗೆ ಸವಾಲನ್ನು ಹಾಕಿ ನನ್ನನ್ನು ಸೋಲಿಸಿದವರು, ಯಾರು ಇದ್ದಾರೆ ಬನ್ನಿ ಎಂದಾಗ ವಾದ ವಿವಾದದಲ್ಲಿ ವಾದಿಮತ ಗಜೇಂದ್ರನನ್ನು ಮಾಧವ ್ ಭಟ್ಟರು ಎಂಬ ಬ್ರಾಹ್ಮಣ ಸೋಲಿಸಿದರು, ಇದಕ್ಕೆ ಪ್ರತಿಯಾಗಿ ರಾಜ ಹರಿವರ್ಮನ್ನು ಈ ವರಕೊಡು ಗ್ರಾಮವನ್ನು ಅವರಿಗೆ ಕಾಣಿಕೆಯಾಗಿ ಕೊಟ್ಟನು. ಅನಂತರದಲ್ಲಿ ಈ ಗ್ರಾಮವು ಬಹುಶಃ ಬ್ರಾಹ್ಮಣ ಅಗ್ರಹಾರವಾಗಿ ಅಭಿವೃದ್ಧಿಯಾಗಿರಬೇಕು, ಈ ಊರು ಸಹ ಅನಂತರದಲ್ಲಿ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವನ್ನು ಮುಂದುವರಿಸಿಕೊಂಡು ಬಂದಿದೆ. ಅದಕ್ಕೆ ಸಾಕ್ಷಿ ಎಂಬಂತೆ ಅಲ್ಲಿರುವ ಸ್ಮಾರಕಗಳು ಇಂದಿಗೂ ಅವು ಅವು ಐತಿಹಾಸಿಕತೆಯನ್ನು ತಿಳಿಸಿಕೊಡುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳು ವರ ್ ಕೊಡು ವರದರಾಜ ಸ್ವಾಮಿ ದೇವಾಲಯ ವರದರಾಜ ಮಂದಿರ ಈ ಊರಿನಲ್ಲಿರುವ ಪ್ರಮುಖ ದೇವರು ವರದರಾಜೇಂದ್ರ ವಿಷ್ಣು ದೇವರು ಈ ದೇವಸ್ಥಾನ ಹೊಯ್ಸಳರ ಕಾಲದ್ದು ಸುಮಾರು 750 ವರ್ಷ ಪುರಾತನ ದೇವಸ್ಥಾನವಾಗಿದೆ. ಈಗ ಪುಟ್ಟ ಗ್ರಾಮ ಹಿಂದೆ ಪ್ರಖ್ಯಾತಿಯಾಗಿತ್ತು. ಈ ಊರು ಚಿಕ್ಕ ದೇವರಾಜ, ದೊಡ್ಡ ದೇವರಾಜ ಕಾಲದಲ್ಲಿ ಪ್ರಖ್ಯಾತಿ ಪಡೆದಂತಹ ಊರಾಗಿತ್ತು, ಅನೇಕ ರಾಜರುಗಳಿಂದ ದೇವಾಲಯಕ್ಕೆ ಕಾಣಿಕೆ ದಾನ ಕೊಟ್ಟಿರುತ್ತಾರೆ, ವರದರಾಜ ದೇವಾಲಯವನ್ನು ಇತ್ತೀಚಿಗೆ 2019ರಲ್ಲಿ ಹೊಸದಾಗಿ ಕಟ್ಟಿದ್ದಾರೆ, ದೇವಸ್ಥಾನದಲ್ಲಿ ಗೋಪುರ ಇದೆ. ಆಂಜನೇಯ, ಗಣೇಶ, ಶ್ರೀದೇವಿ, ಭೂದೇವಿ, ದೇವರ ತುಳಸಿ ಕಟ್ಟೆ ವಿಶೇಷವಾಗಿದೆ, ಹಿಂದೆ ಹಳೆ ಕಾಲದಲ್ಲಿ ಅಡುಗೆ ಮಾಡಿ ಪ್ರಸಾದ ಕೊಡಲು ದೊಡ್ಡದಾದ ಕಲ್ಲಿನ ಪಾತ್ರೆ ಇದೆ ವಿಶೇಷವಾಗಿ ಎಂದರೆ ಇಲ್ಲಿ ಚಿಕ್ಕ ಗಣೇಶ ಇದೆ ಗಣೇಶ ಯಾಕೆ ಚಿಕ್ಕದಾಗಿದೆ, ಅಂದರೆ ಬಡವರಿಗೂ ಬೆಣ್ಣೆಯ ಅಭಿಷೇಕ ಹಲವು ಪೂಜೆ ಮಾಡಲು ಅನುಕೂಲವಾಗಲು ಚಿಕ್ಕದಾಗಿದೆ ದೇವಾಲಯವು ಬಹಳ ಸುಂದರವಾಗಿದೆ. 3. ವರಕೋಡು 
  • 38. ವರದರಾಜ ಸ್ವಾಮಿಯ ಪುರಾತನ ಮೂಲ ವಿಗ್ರಹ ಈಗ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿರುವ ವಿಗ್ರಹ
  • 41. ತಿರುಮಕೂಡಲು ನರಸೀಪುರ ಈ ಪ್ರದೇಶವು ಐತಿಹಾಸಿಕವಾಗಿ ಪ್ರಸಿದ್ಧವಾಗಿದೆ. ಈ ಊರು ಹಿಂದಿನಿಂದಲೂ ಧಾರ್ಮಿಕ ಕ್ಷೇತ್ರವಾಗಿದೆ, ಈ ಸ್ಥಳವು ಶೈವ, ವೈಷ್ಣವ, ಜೈನ ಕ್ಷೇತ್ರವಾಗಿದೆ ಮತ್ತು ಇತರ ಎಲ್ಲರಿಗೂ ಸ್ಥಳ ಪವಿತ್ರವಾಗಿದೆ. ಪ್ರಾಚೀನ ಕಾಲದಿಂದಲೂ ಎಲ್ಲ ಧರ್ಮದವರು ಈ ಊರಿನಲ್ಲಿ ಇದ್ದರು ಇದು ತ್ರಿವೇಣಿ ಸಂಗಮವಾಗಿದೆ, ಕಾವೇರಿ, ಕಪಿಲ, ಸ್ಪಟಿಕ ಸರೋವರ ಮೂರು ವರ್ಷಕ್ಕೊಮ್ಮೆ ಕುಂಭಮೇಳ ನಡೆಯುತ್ತದೆ. ಶಂಕರಾಚಾರ್ಯರು 6 ತಿಂಗಳು ಕಾಲ ತಪಸ್ಸು ಈ ಪ್ರದೇಶದಲ್ಲಿ ಆಚರಿಸುತ್ತಾರೆ, ಹೀಗೆ ಹಲವು ರೀತಿಯಿಂದ ಇದು ಪುಣ್ಯಕ್ಷೇತ್ರವಾಗಿದೆ ಮತ್ತು ಕಾಶಿಗಿಂತ ಪವಿತ್ರ ಅಂತ ಹೇಳುತ್ತಾರೆ. ಈ ಕ್ಷೇತ್ರಕ್ಕೆ ಭೇಟಿ ಕೊಟ್ಟರೆ ಕಾಶಿಗಿಂತ ಪುಣ್ಯ ಅಂತ ಹೇಳುತ್ತಾರೆ. ಪ್ರಮುಖ ದೇವಾಲಯಗಳು ಅಗಸ್ತೇಶ್ವರ ದೇವಾಲಯ,ಹನುಮಂತೇಶ್ವರ ದೇವಾಲಯ, ಗುಂಜಾಂ ನರಸಿಂಹಸ್ವಾಮಿ ದೇವಾಲಯ ಮೊದಲನೇದಾಗಿ ಅಗಸ್ತ್ಯೇಶ್ವರ ದೇವಾಲಯ ಪುರಾಣದ ಪ್ರಕಾರ ಅಗಸ್ತ್ಯ ಮುನಿಗಳಿಂದ ಲಿಂಗ ಸ್ಥಾಪನೆ ಆಯಿತು ಎಂದು ಹೇಳುತ್ತಾರೆ.
  • 44. ಈ ದೇವಾಲಯವನ್ನು 10ನೇ ಮತ್ತು 11 ಶತಮಾನದ ಅಂತ್ಯಕಾಲದಲ್ಲಿ ಕಟ್ಟಿದ್ದಾರೆಂದು ನಂಬಲಾಗಿದೆ. ನಂತರ ಹೊಯ್ಸಳ, ವಿಜಯನಗರ, ಮೈಸೂರು ಅರಸರು ಕಾಲ ಕಾಲಕ್ಕೆ ಜೀರ್ಣೋದ್ಧಾರ ಮಾಡಿದ್ದಾರೆ. ಅಗಸ್ತ್ಯೇಶ್ವರ ಗುಡಿಯ ಬಗ್ಗೆ ಇತಿಹಾಸ ಅಗಸ್ತ್ಯ ಮುನಿಗಳು ಹನುಮಂತನಿಗೆ ಕಾಶಿಯಿಂದ ಲಿಂಗ ತೆಗೆದುಕೊಂಡು ಬಾ ಎಂದು ಹೇಳುತ್ತಾರೆ, ಹನುಮಂತ ಕಾಶಿಯಿಂದ ಲಿಂಗ ತರುವುದು ಸ್ವಲ್ಪ ತಡ ಆಗುತ್ತದೆ, ಆವಾಗ ಅಗಸ್ತ್ಯ ಮುನಿಗಳು ಆ ನದಿಯ ಮರಳಿನಲ್ಲಿ ಇದ್ದಂತ ಮರಳಿನಿಂದ ಲಿಂಗವನ್ನು ಮಾಡುತ್ತಾರೆ, ಆಗ ಹನುಮಂತ ಬಂದು ಲಿಂಗ ನೋಡಿದಾಗ ಕೋಪಗೊಂಡು ಲಿಂಗಕ್ಕೆ ತನ್ನ ಕೈ ನಿಂದ ವಜ್ರಮುಷ್ಟಿಯಿಂದ ಲಿಂಗಕ್ಕೆ ಹೊಡೆಯುತ್ತಾನೆ, ಲಿಂಗವು ಮೇಲಿನ ಭಾಗ ಹೊಡೆಯುತ್ತದೆ ಆಗ ಅದರಲ್ಲಿ ನೀರು ಬರುತ್ತದೆ, ಹನುಮಂತ ಮೂರ್ಚೆ ಬೀಳುತ್ತಾನೆ ಅದೇ ನೀರಿನಿಂದ ಆಂಜನೇಯನ ಮುಖಕ್ಕೆ ನೀರು ಹಾಕುತ್ತಾರೆ, ಮುನಿಗಳು ಹನುಮಂತನು ಎಚ್ಚರವಾಗುತ್ತಾನೆ, ಅವಾಗ ಆಂಜನೇಯ ತಂದಂತಹ ಲಿಂಗವನ್ನು ಪಕ್ಕದಲ್ಲಿ ಸ್ಥಾಪನೆ ಮಾಡುತ್ತಾರೆ ಅದೇ ಈಗ ಹನುಮಂತೇಶ್ವರ ದೇವಾಲಯ ಆಗಿದೆ ಮತ್ತು ವಿಶೇಷ ಅಂದ್ರೆ ಅಗಸ್ತ್ಯ ಮುನಿಗಳಿಂದ ಸ್ಥಾಪಿತ ಲಿಂಗದಿಂದ ನೀರು ಬರುತ್ತದೆ, ಇದೇ ನೀರಿನಿಂದ ಈಗಲೂ ಜನರಿಗೆ ಪ್ರಸಾದ ರೀತಿಯಲ್ಲಿ ಕೊಡುತ್ತಾರೆ. ಸುಂದರವಾದ ಕಂಬಗಳು ಮತ್ತು ದೊಡ್ಡದಾದ ಬಾಗಿಲು ಮತ್ತು ದೇವಸ್ಥಾನ ಮುಂಭಾಗ ದೊಡ್ಡದಾದ ದೀಪದ ಕಂಬವಿದೆ ಮತ್ತು ದೇವಸ್ಥಾನ ಪಕ್ಕ ಅರಳಿ ಮರ ಇದೆ ಅಶ್ವತ ್ ಮರ ಪುರಾತನ ಆಗಿದೆ ಮತ್ತೆ ಪಕ್ಕದಲ್ಲಿ ವ್ಯಾಸರಾಯ ಮಠ ಇದೆ.
  • 46. ಆಂಜನೇಯ ಕಾಶಿಯಿಂದ ತಂದಂತಹ ಲಿಂಗ ಆಂಜನೇಯ ಕಾಶಿಯಿಂದ ತಂದಂತಹ ಲಿಂಗವನ್ನು ಈ ಸ್ಥಳದಲ್ಲಿ ಸ್ಥಾಪನೆ ಮಾಡುತ್ತಾರೆ. ಅದೇ ಈಗ ನಾವು ಆಂಜನೇಯ ಕಾಶಿಯಿಂದ ತಂದಂತಹ ಶಿವಲಿಂಗವನ್ನು ಈ ಜಾಗದಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ, ಆದ್ದರಿಂದ ಈ ಲಿಂಗವು ಬಹು ಮುಖ್ಯವಾಗಿದೆ ಈ ಲಿಂಗವು ನೋಡಲು ಬಹಳ ಸುಂದರವಾಗಿದೆ ಮತ್ತು ದೊಡ್ಡದಾಗಿದೆ. ಹನುಮಂತೇಶ್ವರ ದೇವಸ್ಥಾನ ಆಗಿದೆ.
  • 48. ಗುಂಜಾಂ ನರಸಿಂಹಸ್ವಾಮಿ ದೇವಾಲಯ ಈ ದೇವಾಲಯ ಒಬ್ಬ ಅಗಸನಿಂದ ನಿರ್ಮಿತವಾಯಿತು, ಎಂದು ಹೇಳುತ್ತಾರೆ ಪೌರಾಣಿಕ ಹಿನ್ನೆಲೆ ಈ ದೇವಾಲಯ ಬಗ್ಗೆ ಹೇಳುವುದಾದರೆ ಅಗಸನಿಗೆ ಒಂದು ಹುತ್ತದಲ್ಲಿ ವಿಗ್ರಹ ಸಿಕ್ಕಿತು ಕಟ್ಟಲು ಹಣವಿರಲಿಲ್ಲ, ಆದರೆ ಅವನು ಬಟ್ಟೆ ತೊಳೆಯುವ ಕಲ್ಲಿನ ಕೆಳಗಡೆ ನಿಧಿ ಸಿಕ್ಕಿತು, ಈ ನಿಧಿಯಿಂದ ದೇವಾಲಯವನ್ನು ಕಟ್ಟಿದ ಆದರೆ ಅವನಿಗೆ ಕಾಶೀಗೆ ಹೋಗಿ ಪುಣ್ಯವನ್ನು ತೆಗೆದುಕೊಂಡು ಬರಬೇಕಂತ ಆಸೆಯಾಗುತ್ತದೆ. ಆಗ ಅವನು ದೇವರನ್ನು ಕೇಳಿದಾಗ ಸಾಕ್ಷಾತ ್ ನರಸಿಂಹ ಸ್ವಾಮಿ ಅವರೇ ಬಂದು ಈ ಕ್ಷೇತ್ರ ಕಾಶಿಗಿಂತ ಒಂದು ಗುಲಗಂಜಿಗೆ ಹೆಚ್ಚು ಪುಣ್ಯಕ್ಷೇತ್ರ ವಾಗಲಿ ಅಂತ ತನ್ನ ಕೈಯಲ್ಲಿ ತಕ್ಕಡಿ ಮತ್ತು ಗುಲಗಂಜಿಯನ್ನು ಹಿಡಿದಿದ್ದಾರೆ. ಈ ದೇವಸ್ಥಾನಕ್ಕೆ ಭೇಟಿ ಕೊಟ್ಟರೆ ಕಾಶಿಗಿಂತ ಪುಣ್ಯ ಎಂದು ಹೇಳುತ್ತಾರೆ, ಈಗಿರುವ ದೇವಾಲಯವು ವಿಜಯನಗರ ಕಾಲದ್ದು ರಚನೆಯಾಗಿದೆ, ಗರ್ಭಗೃಹದಲ್ಲಿ ನರಸಿಂಹ ವಿಗ್ರಹವಿದೆ ಬಲಗೈಯಲ್ಲಿ ಮರದ ಗುಲಗಂಜಿ, ಮರದ ರೆಂಬೆ ಹಿಡಿದ ನರಸಿಂಹ ಶಿಲ್ಪವಿದೆ, ಗರ್ಭಗೃಹ ಅಂತರಾಳದ ಮುಂದೆ ವಿಶಾಲವಾದ ನವರಂಗ ಇದೆ. ಗುಂಜಾಂ ನರಸಿಂಹಸ್ವಾಮಿ ದೇವಾಲಯ
  • 50.
  • 53. ರಂಗಮಂಟಪ ಈ ದೇವಾಲಯದಲ್ಲಿ ರಂಗ ಮಂಟಪ ಇದ್ದು ಇದು ವಿಜಯನಗರ ಶೈಲಿಯಲ್ಲಿ ನಿರ್ಮಾಣಗೊಂಡಿದೆ, ಕಂಬದ ಮೇಲೆ ರಾಮಾಯಣ, ಕೃಷ್ಣ ,ವಾಮನ, ಆಂಜನೇಯ, ಗರುಡ ಚಿತ್ರಗಳು ಇವೆ, ಅಲ್ಲದೆ ಸುಂದರವಾದ ದ್ವಾರಪಾಲಕರು, ಮಹಿಳೆಯರು ಮತ್ತು ಕೃಷ್ಣನ ಆಟಗಳು ಕೆತ್ತಲ್ಪಟ್ಟಿವೆ ಇದರ ಮುಂಭಾಗದಲ್ಲಿ ಗರುಡನ ವಿಗ್ರಹವಿದೆ. ರಂಗಮಂಟಪ
  • 57. ಈ ದೇವಾಲಯದ ಪ್ರಾಂಗಣದಲ್ಲಿ ರಾಮಾನುಚಾರ್ಯರು ಮತ್ತು ನಮ್ಮಳ್ವಾರ ಅವರ ಸನ್ನಿಧಿ ಇದೆ. ಏಕೆಂದರೆ ಇವರು ವೈಷ್ಣವ ಧರ್ಮವನ್ನು ಪ್ರಖ್ಯಾತಿಗೊಳಿಸಿದವರು ಮತ್ತು ವಿಷ್ಣುವಿನ ಪರಮಭಕ್ತರಾಗಿದ್ದರು. ರಾಮಾನುಚಾರ್ಯರು 12ನೇ ಶತಮಾನದಲ್ಲಿ ಕರ್ನಾಟಕಕ್ಕೆ ಬಂದು ವೈ ಷ್ಣವ ಧರ್ಮವನ್ನು ಪ್ರಖ್ಯಾತಿಗೊಳಿಸಿದರು ಹಲವು ವೈಷ್ಣವ ದೇವಾಲಯಗಳನ್ನು ಕಟ್ಟಿಸಿದರು.
  • 58. ಈ ಕಂಬದ ಮಹತ್ವ ಈ ಕಂಬದ ಮಹತ್ವ ವಿಶೇಷವೆಂದರೆ ಕಂಬದ ಮೇಲೆ ಹಲ್ಲಿಯ ಚಿತ್ರವಿದೆ, ಇದನ್ನು ಇಲ್ಲಿಗೆ ಬರುವ ಭಕ್ತರು ಅದನ್ನು ಮುಟ್ಟಿ ನಮಸ್ಕಾರ ಮಾಡುತ್ತಾರೆ ಆಶೀರ್ವಾದ ಪಡೆಯುತ್ತಾರೆ. ಏಕೆಂದರೆ ಹಿಂದೆ ಹಲ್ಲಿ ನಮ್ಮ ಮೇಲೆ ಬಿದ್ದರೆ ಅದರ ದೋಷ ಪರಿಹಾರಕ್ಕೆ ಕಂಚಿಗೆ ಹೋಗುತ್ತಿದ್ದರು, ಆದರೆ ಇಲ್ಲಿನವರಿಗೆ ಕಂಚಿಯು ಬಹು ದೂರದ ಪ್ರಯಾಣ ಅಂದು ಅಲ್ಲಿಗೆ ಹೋಗುವ ಬದಲು ಇಲ್ಲಿ ಬಂದು ದರ್ಶನ ಪಡೆದರೆ ದೋಷ ವಿಮುಕ್ತಿ ಆಗುತ್ತದೆ ಎಂದು ಜನರ ನಂಬಿಕೆಯಾಗಿದೆ. ಹಲ್ಲಿಯ ಚಿತ್ರವಿರುವ ಕಂಬ
  • 60. ನರಸೀಪುರದಲ್ಲಿ ಪುರಾತನ ಜೈನ ವಿಗ್ರಹ ನರಸೀಪುರದಲ್ಲಿ ಪುರಾತನ ಜೈನ ವಿಗ್ರಹ ಸಂತೆ ಮಾಳ ಪ್ರದೇಶದ ಮೂಲ ಸ್ಥಾನೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಅರಳಿ ಮರದ ಕೆಳಗಡೆ ಒಂದು ಜೈನ ತೀರ್ಥಂಕರ ವಿಗ್ರಹ ಇದೆ. ಇಲ್ಲಿ ಯಾವುದೇ ಬಸದಿಯು ಇದ್ದಿರಲಿಲ್ಲ ಆದ್ದರಿಂದ ಈ ವಿಗ್ರಹವನ್ನು ಬೇರೆ ಕಡೆಯಿಂದ ತಂದಿಟ್ಟಿರಬಹುದು, ಇದರಿಂದ ಇಲ್ಲಿ ಜೈನ ಬಸದಿಗಳು ಇದ್ದವು ಆದರೆ ಕಾಲ ನಂತರ ಅವು ಇಲ್ಲ ಎಂಬುದು ಈ ವಿಗ್ರಹದಿಂದ ಗೊತ್ತಾಗುತ್ತದೆ ಏಕೆಂದರೆ ಗಂಗಮನೆತನದ ಹಲವು ರಾಜರು ಜೈನ ಧರ್ಮಕ್ಕೆ ಆಶ್ರಯದಾತರಾಗಿದ್ದರು, ಚಾವುಂಡರಾಯನು ಇದೆ ಪ್ರದೇಶವನ್ನಾಗಿದ್ದ ಆದ್ದರಿಂದ ಈ ಕಾಲದಲ್ಲಿ ಇಲ್ಲಿ ಹಲವು ಜೈನ ಬಸದಿಗಳು ಇದ್ದವು ಇದು ಒಂದು ಉದಾಹರಣೆ.
  • 61. ಈ ಊರಿನಲ್ಲಿ ಭಕ್ತ ಪ್ರಹ್ಲಾದ ನಾಟಕವನ್ನು ಯಾರು ಮಾಡುವುದಿಲ್ಲ, ಏಕೆಂದರೆ ಈ ನಾಟಕ ಮಾಡಿದವರಿಗೆ ತೊಂದರೆಯಾಗುತ್ತದೆ ಎಂಬುದು ಜನರ ನಂಬಿಕೆಯಾಗಿದೆ. ಹಿಂದೆ ಈ ಊರು ಪ್ರಸಿದ್ಧವಾಗಿತ್ತು ಈಗಲೂ ಪ್ರಸಿದ್ಧವಾಗಿದೆ ಏಕೆಂದರೆ ಮಹಾನ ್ ವ್ಯಕ್ತಿಗಳಾದ ಅಗಸ್ತ್ಯ ಮುನಿಗಳು, ಶಂಕರಾಚಾರ್ಯರು ಹಲವು ಸಂತರು ಬಂದು ಈ ಪ್ರದೇಶದಲ್ಲಿ ಇದ್ದು ತಮ್ಮ ತಪಸ್ಸನ್ನು ಆಚರಿಸುವಂತಹ ಈ ನರಸೀಪುರ ಪ್ರದೇಶವು ಐತಿಹಾಸಿಕವಾಗಿ ಪ್ರಸಿದ್ಧವಾಗಿದೆ.
  • 63. ಗರ್ಗೇಶ್ವರಿ ವಿಗ್ರಹ ಗರ್ಗೇಶ್ವರಸ್ವಾಮಿ ದೇವಾಲಯ ಇರುವುದು ನರಸೀಪುರದಿಂದ ಸ್ವಲ್ಪ ದೂರದಲ್ಲಿ ಗರ್ಗೇಶ್ವರಿ ಎಂಬ ಊರು ದೇವಾಲಯವು ಗರ್ಗಾಚಾರ್ಯರಿಂದ ಇದು ಸ್ಥಾಪನೆ ಆಯಿತು ಅನ್ನುತ್ತಾರೆ. ಇದು ಶಿವ ಪಾರ್ವತಿ ದೇವಾಲಯ ಆಗಿದೆ ಮತ್ತು ದೇವಸ್ಥಾನದ ಹೊರಗಡೆ ಶಿವ ಪಾರ್ವತಿಯ ಸುಂದರವಾದ ಚಿತ್ರವಿದೆ, ಅರ್ಚಕರು ಹೇಳುವ ಪ್ರಕಾರ ಇಲ್ಲಿನ ಲಿಂಗವು ಬೆಳೆಯುತ್ತಾ ಹೋಗುತ್ತಿದೆ ಎನ್ನುತ್ತಾರೆ.
  • 64. ಪ್ರಶ್ನೆ ಮಹಾಗಣಪತಿ ಪ್ರಶ್ನೆ ಮಹಾಗಣಪತಿ ಈ ಗಣೇಶ ಹೆಸರು ಯಂತ್ರ ಪ್ರಶ್ನೆ ಮಹಾ ಗಣಪತಿ ಇದನ್ನು ಶಂಕರಾಚಾರ್ಯರು ಪ್ರತಿಷ್ಠಾಪನೆ ಮಾಡಿದ್ದಾರೆ ಎಂದು ಹೇಳುತ್ತಾರೆ. ಶ್ರೀ ಗಣಪತಿಗೆ ಯಂತ್ರ ಹಾಕಿದ್ದಾರೆ ಎಂದರೆ ಭಕ್ತರ ಕೋರಿಕೆಗಳು, ಅವರ ತೊಂದರೆ ನಿವಾರಣೆ ಮಾಡುವ ಶಕ್ತಿ ತುಂಬಿದ್ದಾರೆ, ಈ ಗಣೇಶ ವಿಶೇಷ ಅಂದರೆ ಗಣಪತಿಯು 5 ರಿಂದ 6 ಕೆಜಿ ಇದೆ ಇದನ್ನು ಎತ್ತಬಹುದು ಆದರೆ ನಮ್ಮ ಮನಸ್ಸಿನಲ್ಲಿ ಏನು ಪ್ರಶ್ನೆ ಹಾಕಿದ್ದೇವೆ ಅದು ಸುಲಭವಾಗಿ ಆಗುವ ಹಾಗಿದ್ದರೆ ಗಣೇಶ ಮೂರ್ತಿಯನ್ನು ಹಗುರವಾಗಿ ಎತ್ತಬಹುದಾಗಿದೆ, ನಮ್ಮ ಕೆಲಸ ಆಗುವುದು ನಿಧಾನವಾಗುವುದಾದರೆ ಅಥವಾ ಸ್ವಲ್ಪ ಕಷ್ಟ ಇದ್ದಾಗ ಅದು ಕೈಯಲ್ಲಿ ಎತ್ತುವಾಗ ಭಾರ ಎನಿಸುತ್ತದೆ, ಇದು ಶನಿವಾರ, ಭಾನುವಾರ ಮಾತ್ರ ಭಕ್ತರಿಗೆ ತಾವೇ ಪರೀಕ್ಷಿಸಿಕೊಳ್ಳಲು ಅವಕಾಶವಿರುತ್ತದೆ ಅದಕ್ಕೆ ರೂ 50 ನೀಡಬೇಕಾಗುತ್ತದೆ.
  • 65. ಈ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾದಂತಹ ದೀಕ್ಷಿತ ್ ಪುರೋಹಿತರು ಇದ್ದಾರೆ, ಪೂಜೆ ಪುನಸ್ಕಾರಗಳು ತುಂಬಾ ಚೆನ್ನಾಗಿ ನಡೆಯುತ್ತವೆ. ಹೊರಗಡೆಯಿಂದ ನೋಡಿದರೆ ದೇವಸ್ಥಾನವು ತುಂಬಾ ಸುಂದರವಾಗಿದೆ, ಒಳಗಡೆಯೂ ಸಹ ಅಷ್ಟೇ ಸುಂದರವಾಗಿದೆ ಈ ಸ್ಥಳದ ವಿಶೇಷ ಎಂದರೆ ಊರಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಸಮುದಾಯದವರು ವಾಸಿಸುತ್ತಿರುವುದು ಹಾಗೂ ಇತರ ಎಲ್ಲ ಸಮುದಾಯದವರು ಇಲ್ಲಿ ಸಹಬಾಳ್ವೆಯಿಂದ ಇದ್ದಾರೆ.
  • 66. ಮೈ ಸೂರಿನ ಭಾಗದವರು ಇದನ್ನು ದೊಡ್ಡದ ಮರ ಎಂದು ಕರೆಯುತ್ತಾರೆ. ಇದು ಮೈ ಸೂರು ಟಿ ನರಸೀಪುರ ರಸ್ತೆಯಲ್ಲಿದೆ ಮೈ ಸೂರಿನಿಂದ 8 ಕಿಲೋಮೀಟರ ್ ದೂರದಲ್ಲಿದೆ. ಇದು ಕರ್ನಾಟಕದ ಎರಡನೇ ದೊಡ್ಡ ಆಲದ ಮರ ಆಗಿದೆ, ಇದು ನೋಡಲು ಛತ್ರಿಯ (ಅಂಬ್ರೆಲ್ಲಾ) ರೀತಿ ಇದೆ ನೋಡಲು ಬಹಳ ಸುಂದರವಾಗಿದೆ ಆದ್ದರಿಂದ ಇದು ಒಂದು ಪ್ರವಾಸಿ ತಾಣ ವಾಗಿದೆ. ಈ ಮರದ ಕೆಳಗಡೆ ಮುನೇಶ್ವರ ದೇವರು ಇದೆ ಇಂದಿಗೂ ಇಲ್ಲಿ ಸ್ಥಳೀಯ ಜನರು ಪೂಜೆ ಮಾಡುತ್ತಾರೆ, ಈ ಮರವು 1 ಎಕರೆ ನಾಲ್ಕು ಗುಂಟೆ ಹಬ್ಬಿದೆ ಈ ಜಮೀನಿನ ಮಾಲೀಕರನ್ನು ವಿಚಾರಿಸಿದಾಗ ಇದು 300 ವರ್ಷ ಹಳೆಯದಾಗಿದೆ ಎಂದು ಮತ್ತು ಇದನ್ನು ನಾಲ್ಕು ತಲೆಮಾರಿನ ಹಿಂದಿನವರು ನೆಟ್ಟಿರುತ್ತಾರೆ ಎಂದು ಈ ಜಮೀನನ್ನು ಮತ್ತು ಮರವನ್ನು ನೋಡಿಕೊಳ್ಳುತ್ತಿರುವ ಮಾಲೀಕ ಮಹಾದೇವ ಅವರು ಹೇಳುತ್ತಾರೆ. ಮೈಸೂರಿನ ನಗರಾಡಳಿತ ದವರು ಇದನ್ನು ಮೈಸೂರಿನ ಪಾರಂಪರಿಕ ಮರ ಎಂದು ಘೋಷಣೆ ಮಾಡಿದ್ದಾರೆ, ಈ ಮರದ ಕೆಳಗಡೆ ವಿದೇಶಿಯರು ಬಂದು ಯೋಗ ಮತ್ತು ಹಲವು ಸಾಂಸ್ಕ ೃತಿಕ ಕಾರ್ಯಕ್ರಮಗಳು ನಡೆಸುತ್ತಿರುತ್ತಾರೆ ಸುತ್ತಮುತ್ತಲಿನ ಜನರು ಬಿಸಿಲಿನ ಸಮಯದಲ್ಲಿ ವಿಶ್ರಾಂತಿಗೆ ಈ ಮರದ ಕೆಳಗಡೆ ಬಂದು ಕುಳಿತುಕೊಳ್ಳುತ್ತಾರೆ, ಸಿನಿಮಾಗಳು ಇಲ್ಲಿ ಚಿತ್ರತವಾಗಿವೆ ಅವು ಕನ್ನಡ, ಹಿಂದಿ, ತಮಿಳು ಮತ್ತು ಇನ್ನು ಹಲವಾರು ಭಾಷೆಗಳಾಗಿದ್ದಾವೆ, ಅದರಲ್ಲಿ ಪ್ರಮುಖವಾಗಿ ರಾಜ ಹಿಂದುಸ್ತಾನಿ ಅಮೀರ ್ ಖಾನ ್ ಅವರದು ತಮಿಳು ಚಿತ್ರ ಬಾಬಾ ರಜನಿಕಾಂತ ್ ಅವರದು ಸಂಗೊಳ್ಳಿ ರಾಯಣ್ಣ, ಕೆಜಿಎಫ ್ ಹೀಗೆ ಹಲವಾರು ಸಿನಿಮಾಗಳು ಆಗಿದ್ದಾವೆ. ಈ ಜಾಗದಲ್ಲಿ ಆದ್ದರಿಂದ ಇದು ಬಹಳ ವಿಶೇಷತೆಯನ್ನು ಪಡೆದಿದ್ದು ಪ್ರೇಕ್ಷಣೀಯ ಸ್ಥಳವಾಗಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ. 5. ಚಿಕ್ಕಳ್ಳಿಯ ಆಲದ ಮರ
  • 68.
  • 69.
  • 70. ಪ್ರಾಚೀನ ಕಾಲದಲ್ಲಿ ಮೈ ಸೂರಿನ ಭಾಗದಲ್ಲಿ ನರಬಲಿ ಪದ್ಧತಿಯು ಆಚರಣೆಯಲ್ಲಿ ಇತ್ತು, ಎಂಬ ಅಂಶವು ಈ ಭಾಗದಲ್ಲಿ ಕೆಲವು ಪ್ರದೇಶಗಳ ಕಲ್ಲಿನ ಮೇಲಿನ ಚಿತ್ರಗಳು ನಮಗೆ ಆಲನಹಳ್ಳಿ ಮತ್ತು ನಾಡನಹಳ್ಳಿ ಮಧ್ಯ ಇರುವ ಕೆರೆಯ ದಂಡೆಯ ಮೇಲೆ ಸಿಗುತ್ತವೆ. ಮೈ ಸೂರು ಟಿ. ನರಸೀಪುರ ರಸ್ತೆಯಲ್ಲಿರುವ ನಾಡನಹಳ್ಳಿ ಗ್ರಾಮದ ಬಳಿಯ ಕೆರೆಯ ಪಕ್ಕ ನರಬಲಿಯ ಚಿತ್ರಗಳು ಇದ್ದಾವೆ. ಈ ಶಿಲೆಯಲ್ಲಿ ಇದ್ದಾವೆ ನಾನು ಈ ಗ್ರಾಮದ ಮುಖಂಡರು ನನ್ನ ಸ್ನೇಹಿತನ ಮಾಲಿಂಗ ಸ್ವಾಮಿ ಮತ್ತು ಸತೀಶ ್ ಇವರು ಸಂಗತಿಗಳನ್ನು ಹೇಳಿದರು, ಕೆರೆ ಹತ್ತಿರ ಸಣ್ಣ ಸಣ್ಣದಾದ ಹಲವು ದೇವಾಲಯಗಳು ಇದ್ದಾವೆ. ಅದರಲ್ಲಿ ಖ್ಯಾತರಾಯ ಎಂಬ ದೇವರ ವಿಗ್ರಹವಿದೆ ಅದರ ಪಕ್ಕದಲ್ಲಿ ಮನುಷ್ಯನನ್ನು ಬಲಿಕೊಡುವ ಚಿತ್ರಗಳು ಕಲ್ಲಿನ ಮೇಲೆ ಇದೆ, ಇದರಿಂದ ನಮಗೆ ಗೊತ್ತಾಗುವುದೇನೆಂದರೆ, ಇಲ್ಲಿ ನರಬಲಿ ಪದ್ಧತಿಯ ಆಚರಣೆ ಇತ್ತು ಎಂದು ತಿಳಿಯಬಹುದು. ಈಗಲೂ ಇಲ್ಲಿರುವ ದೇವರು ಖ್ಯಾತರಯನಿಗೆ ಕುರಿ ಬಲಿ ಕೊಡುವ ಪದ್ಧತಿ ಇದೆ, ಹಿಂದೆ ಕೋಣಗಳನ್ನು, ಈಗ ಕುರಿಗಳನ್ನು ಬಲಿ ಕೊಡುವ ಪದ್ಧತಿ ಈಗಲೂ ಮುಂದುವರೆದಿದೆ ಪ್ರತಿ ವರ್ಷ ಫೆಬ್ರವರಿ ತಿಂಗಳ ಎರಡನೇ ವಾರದಲ್ಲಿ ನಡೆಯುತ್ತದೆ, ಪಂಜಿನ ಮೆರವಣಿಗೆ ಮುಖಾಂತರ ರಾತ್ರಿ ಸಮಯದಲ್ಲಿ ದೇವರಿಗೆ ಪೂಜೆ ಮಾಡಿ ಊರಿನೊಳಗಡೆ ಹೋಗುತ್ತಾರೆ. ಹಿಂದಿನ ಕಾಲದಲ್ಲಿ ಊರಿಗೆ ಒಳ್ಳೆಯದಾಗಲಿ, ಊರಿಗೆ ದುಷ್ಟ ಶಕ್ತಿಗಳ ಕಣ್ಣು ಬೀಳದೆ ಇರಲಿ,ಊರಿಗೆ ರೋಗರುಜಿನೆಗಳು ಬರದ ಹಾಗೆ ಇರಲಿ, ಊರಿಗೆ ಜನರಿಗೆ ಒಳ್ಳೆಯದಾಗಲಿ ಎಂದು ತಿಳಿಸುವ ಈ ಬಲಿಕೊಡುವ ಪದ್ಧತಿ ಇತ್ತು ಅಂತ ಹೇಳುತ್ತಾರೆ. ನರಬಲಿ ಯಾವ ಕಾಲದಲ್ಲಿ ಇತ್ತು ಅಂತ ತಿಳಿಸುವ ಯಾವ ಆಧಾರವು ಇಲ್ಲ ಆದರೆ ಕಲ್ಲಿನ ಮೇಲೆ ಚಿತ್ರಗಳು ಇವೆ ಮತ್ತೆ ಸ್ಥಳೀಯ ಜನರು ಈ ಪದ್ಧತಿ ಇತ್ತು ಅಂತ ಹೇಳುತ್ತಾರೆ. 6. ನರಬಲಿ
  • 71. ನರಬಲಿ ಇರುವ ಕಲ್ಲಿನ ಮೇಲಿನ ಚಿತ್ರ
  • 73. ಈ ಕೆರೆಯ ಪಕ್ಕ ಇರುವ ಇತರ ಶಿಲ್ಪಗಳು
  • 74. ಉಪಸಂಹಾರ ನನ್ನ ಈ ಅಧ್ಯಯನದಿಂದ ಒಟ್ಟಾರೆಯಾಗಿ ಇತಿಹಾಸದ ಹಲವು ವಿಷಯಗಳು ಇನ್ನು ಹೆಚ್ಚು ಬೆಳಕಿಗೆ ಬರಬೇಕಾಗಿದೆ, ಅಂದರೆ ದೇವಾಲಯಗಳ ಮಹತ್ವ ಅದರ ಶೈಲಿ ಆ ಊರುಗಳು ಹಿಂದೆ ಇದ್ದ ಪ್ರಾಮುಖ್ಯತೆ ಹಿಂದೆ ಮತ್ತು ಇವತ್ತು ಧಾರ್ಮಿಕ ಆರಾಧನೆಗಳು ನನಗೆ ತಿಳಿಯಿತು. ಇಲ್ಲಿನ ವಿಶೇಷ ಆಚರಣೆಗಳು, ಈ ಸ್ಥಳಗಳು ಪ್ರಕೃತಿ ಮನೋಹರವಾಗಿದೆ, ಇದರಿಂದ ನನಗೆ ಸಂತೋಷವಾಯಿತು. ಇನ್ನು ಹೆಚ್ಚಿನ ಸಂಶೋಧನೆಗೆ ಇದು ದಾರಿಯಾಯಿತು. ಆದ್ದರಿಂದ ಈ ಊರುಗಳ ಬಗ್ಗೆ ದೇವಾಲಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನನ್ನ ಕೈಲಾದಷ್ಟು ಸಂಗ್ರಹಿಸಿದ್ದೇನೆ, ಇವುಗಳ ವಿಶೇಷತೆ ಹೇಳಿದ್ದೇನೆ, ಇದರಿಂದ ಹಲವು ಹೊಸ ಸಂಶೋಧನೆಕಾರರಿಗೆ ಸಹಾಯ ಆಗಬಹುದು, ಇನ್ನು ಹೆಚ್ಚಿನ ಸಂಶೋಧನೆಗಳು ಆಗಲಿ ಎಂದು ನಾನು ಬಯಸುತ್ತೇನೆ. ನಾನು ನನ್ನ ಎಂ ಎ ಪದವಿ ಮಿತಿಯಲ್ಲಿ ಮಾಡಿದ್ದೇನೆ, ನಾನು ಸಂಶೋಧನೆ ರೀತಿಯಲ್ಲಿ ಮಾಡಿಲ್ಲ ಹೆಚ್ಚಿನ ಸಂಶೋಧನೆ ಆಗಬೇಕು ಹೆಚ್ಚು ವಿಷಯಗಳು ಬೆಳಕಿಗೆ ಬರಬೇಕು.
  • 75. ಆಕರ ಗ್ರಂಥಗಳು ಮತ್ತು ಮಾಹಿತಿಗಳು 1.ಎಪಿಗ್ರಾಫಿ ಕರ್ನಾಟಕ ಮೈ ಸೂರು ಜಿಲ್ಲೆ ನಾಲ್ಕನೇ ಸಂಪುಟ, ಲೇಖಕರು ಬಿ. ಎಲ ್. ರೈ ಸ ್ ಇದನ್ನು ಮರು ಪ್ರಕಟಿಸಿದವರು ಕನ್ನಡ ಅಧ್ಯಯನ ಸಂಸ್ಥೆ ಮೈ ಸೂರು ವಿಶ್ವವಿದ್ಯಾಲಯ 1975. 2.ತಿರುಮಲ ಕೊಡಲು ನರಸೀಪುರ ತಾಲೂಕು ಗೆಜೆಟಿಯರ ್ (ಕರ್ನಾಟಕ ಸರ್ಕಾರ), ಲೇಖಕರು ಎಸ ್. ರಾಜೇಂದ್ರಪ್ಪ. 3.ಕರ್ನಾಟಕ ಗ್ರಾಮ ಚರಿತ್ರೆ ಕೋಶ ಮೈ ಸೂರು ಜಿಲ್ಲೆ ,ಭಾಗ-1 ಲೇಖಕರು ಪ್ರೊಫೆಸರ ್. ಡಿ. ವಿ. ನಾಯಕ ್ 2019 4.ಮೈ ಸೂರು ತಾಲೂಕು ಗೆಜಿಟಿಯರ ್(ಕರ್ನಾಟಕ ಸರ್ಕಾರ), ಲೇಖಕರು ಡಾಕ್ಟರ ್ ಎನ ್. ಎನ ್. ಚಿಕ್ಕ ಮಾದು 5.ಮೈ ಸೂರು ನೂರಿ ನೂರು ವರ್ಷಗಳ ಹಿಂದೆ, ಪ್ರೊಫೆಸರ ್. ಪಿ.ವಿ. ನರಸಿಂಹರಾಜು 6. ಶ್ರೀ ಗರ್ಗೇಶ್ವರ ್ ಮಹಾತ್ಮೆ, ಲೇಖಕರು ಜಿ.ಎ. ಶಿವರಾಮಕೃಷ್ಣ
  • 76. ನೇರ ಸಂದರ್ಶನ 1.ಚಾಮರಾಜನಗರದ ವಿಜಯ ಪಾರ್ಶ್ವನಾಥ ಬಸದಿಯ ಅರ್ಚಕರು ಪ್ರೇಮ ್ ಚಂದ್ರ 2.ಹನುಮಂತೇಶ್ವರ ದೇವಸ್ಥಾನದ ಅರ್ಚಕರು ನರಸೀಪುರದ ಮುಖಂಡರು ಮತ್ತು ಜನರು 3.ಚಿಕ್ಕಳ್ಳಿ ಆಲದ ಮರದ ಮಾಲೀಕರು ಮಹದೇವ ್ ವರುಣಾದ ದೇವಸ್ಥಾನದ ಅರ್ಚಕ ಸಂತೋಷ ಆರಾಧ್ಯ ಮತ್ತು ಗ್ರಾಮದ ಮುಖಂಡರು 4.ವರದರಾಜ ದೇವಸ್ಥಾನದ ಅರ್ಚಕರು 5.ನಾಡನಹಳ್ಳಿಯ ಮಹಾಲಿಂಗ ಸ್ವಾಮಿ ಸತೀಶ ್ ಹಲವು ಹಿರಿಯರು 6.ಗರ್ಗೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರು ದೀಕ್ಷಿತ